ಅ
(22)
ಆ
(10)
ಇ
(4)
ಈ
(0)
ಉ
(10)
ಊ
(2)
ಋ
(0)
ೠ
(0)
ಎ
(5)
ಏ
(1)
ಐ
(1)
ಒ
(6)
ಓ
(1)
ಔ
(0)
ಅಂ
(7)
ಅಃ
(7)
ಕ
(38)
ಖ
(0)
ಗ
(21)
ಘ
(0)
ಙ
(0)
ಚ
(3)
ಛ
(0)
ಜ
(5)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(13)
ಥ
(0)
ದ
(6)
ಧ
(2)
ನ
(9)
ಪ
(13)
ಫ
(0)
ಬ
(17)
ಭ
(12)
ಮ
(29)
ಯ
(5)
ರ
(3)
ಱ
(0)
ಲ
(4)
ವ
(23)
ಶ
(13)
ಷ
(0)
ಸ
(15)
ಹ
(15)
ಳ
(0)
ವಚನಕಾರ: ಅರಿವಿನ ಮಾರಿತಂದೆ
ಅಂಕಿತ ನಾಮ: ಸದಾಶಿವ ಮೂರ್ತಿಲಿಂಗ
ಕಾಲ: 1160
ದೊರಕಿರುವ ವಚನಗಳು: 309 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ, ಸು. 1160. ಅರಿವಿನ ಸ್ವರೂಪದ ಚರ್ಚೆ ಈತನ ಮುಖ್ಯ ಆಸಕ್ತಿ. ಈತನ 309 ವಚನಗಳು ದೊರೆತಿವೆ. ಗುರು, ಲಿಂಗ, ಜಂಗಮ ಮೊದಲಾದ ಪಾರಿಭಾಷಿಕಗಳ ಅರ್ಥವನ್ನು ಕುರಿತ ಚಿಂತನೆ ಈತನಲ್ಲಿದೆ. ಅನೇಕ ರಚನೆಗಳು ಬೆಡಗಿನ ವಚನಗಳ ರೂಪದಲ್ಲಿವೆ.
ಹಾವು ಹುಲಿ ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ? ನೋವಾದಡಾಗಲಿ, ಇದರಿಂದ ಎನಗೆ ಕೇಡಿಲ್ಲ. ಕಂಡು ಸುಮ್ಮನಿದ್ದಡೆ, ಆ ಗುರುವಿನ ಸುಖದುಃಖ ಎನ್ನದಾಗಿ, ಸಮಯಕ್ಕಂಜಿದಡೆ ಎನ್ನ ಮಾಡುವ ಮಾಟ ಎನ್ನ ಕೇಡು, ಎನ್ನ ಅರಿವು ಮರವೆಯಲ್ಲಿದ್ದಡೆ, ಭವದುಃಖಕ್ಕೆ ಬೀಜ. ಎನ್ನ ಕೈಯಲ್ಲಿ ಎನ್ನಂಗವ ತೊಳೆಯಬೇಕಲ್ಲದೆ ಅನ್ಯರಿಗೆ ಹೇಳಲೇಕಯ್ಯಾ? ಇಂತೀ ಮೂರರೊದಗ ನಾ ಮಾಡಿ ಹಾನಿಯ ಪಡೆವುದಕ್ಕೇನು? ಅಂದಿಗೇನಾದಡಾಗಲಿ ಇಂದಿಗೆ ಶುದ್ಧ, ಸದಾಶಿವಮೂರ್ತಿಲಿಂಗದಲ್ಲಿ.
ಹೃದಯದಲ್ಲಿ ತೋರುವ ಅರಿವು ತನ್ಮಯವಾಗಿ, ಇದಿರಿಟ್ಟ ಭಾವಕ್ಕೆ ನೆಲೆಗೊಂಡು, ಭಾವ ತುಂಬಿ ಕಂಗಳ ಮಧ್ಯದಲ್ಲಿ ಹಿಂಗದೆ ನಿಶ್ಚೈಸಿ, ಅನಿಮಿಷನಂಗದಂತೆ, ಕೂರ್ಮನ ಸ್ನೇಹದಂತೆ, ಅಂಬು ಅಂಬುಜದಂತೆ, ಉಭಯ ಸಂಗದಲ್ಲಿ ನಿಸ್ಸಂಗನ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
ಹುಲಿ ಹುತ್ತವ ಹೊಕ್ಕು ಹಾವಾದ ಭೇದವನಾರು ಬಲ್ಲರು? ಹಾವು ಹುತ್ತವ ಬಿಟ್ಟು ಹದ್ದಾದ ಭೇದವನಾರು ಬಲ್ಲರು? ಹುಲಿ ಹಾವು ಹದ್ದು ಕೂಡಿ ಕುಲವ ಹೊರಗಿಟ್ಟು ಒಳಗಾದ ಭೇದವನಾರು ಬಲ್ಲರು? ಇಂತೀ ಸ್ಥೂಲ ಸೂಕ್ಷ್ಮ ಕಾರಣತ್ರಯ ಕೂಡಿ ತತ್ವದಲ್ಲಿ ನಿಂದು, ಬಚ್ಚಬಯಲಾಯಿತ್ತು ಸದಾಶಿವಮೂರ್ತಿಲಿಂಗದಲ್ಲಿ.