ಅ
(22)
ಆ
(10)
ಇ
(4)
ಈ
(0)
ಉ
(10)
ಊ
(2)
ಋ
(0)
ೠ
(0)
ಎ
(5)
ಏ
(1)
ಐ
(1)
ಒ
(6)
ಓ
(1)
ಔ
(0)
ಅಂ
(7)
ಅಃ
(7)
ಕ
(38)
ಖ
(0)
ಗ
(21)
ಘ
(0)
ಙ
(0)
ಚ
(3)
ಛ
(0)
ಜ
(5)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(13)
ಥ
(0)
ದ
(6)
ಧ
(2)
ನ
(9)
ಪ
(13)
ಫ
(0)
ಬ
(17)
ಭ
(12)
ಮ
(29)
ಯ
(5)
ರ
(3)
ಱ
(0)
ಲ
(4)
ವ
(23)
ಶ
(13)
ಷ
(0)
ಸ
(15)
ಹ
(15)
ಳ
(0)
ವಚನಕಾರ: ಅರಿವಿನ ಮಾರಿತಂದೆ
ಅಂಕಿತ ನಾಮ: ಸದಾಶಿವ ಮೂರ್ತಿಲಿಂಗ
ಕಾಲ: 1160
ದೊರಕಿರುವ ವಚನಗಳು: 309 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ, ಸು. 1160. ಅರಿವಿನ ಸ್ವರೂಪದ ಚರ್ಚೆ ಈತನ ಮುಖ್ಯ ಆಸಕ್ತಿ. ಈತನ 309 ವಚನಗಳು ದೊರೆತಿವೆ. ಗುರು, ಲಿಂಗ, ಜಂಗಮ ಮೊದಲಾದ ಪಾರಿಭಾಷಿಕಗಳ ಅರ್ಥವನ್ನು ಕುರಿತ ಚಿಂತನೆ ಈತನಲ್ಲಿದೆ. ಅನೇಕ ರಚನೆಗಳು ಬೆಡಗಿನ ವಚನಗಳ ರೂಪದಲ್ಲಿವೆ.
ಉಪ್ಪಿನ ನೀರು ಹೆಪ್ಪ ಬಲಿದು ಘಟ್ಟಿಯಾದಂತೆ ಮತ್ತೆ ಅಪ್ಪುವ ಬೆರಸಿ ತನ್ನಂಗ ತಪ್ಪದಂತೆ, ಸಕಲ ಶಾಕಂಗಳಲ್ಲಿ ತನ್ನಯ ಇರವ ತೋರಿ ಕುರುಹಿಂಗೆ ಬಾರದಂತೆ ವಸ್ತು ಅಂಗದಲ್ಲಿ ತನ್ಮಯವಾಗಿ ವೇಧಿಸಿ ಉಭಯ ನಾಮವಳಿದು, ಸದಾಶಿವಮೂರ್ತಿಲಿಂಗದಲ್ಲಿ ಕೂಟಸ್ಥವಾಗಿರಬೇಕು.
ಉರಿಯ ಮಡುವಿನಲ್ಲಿ ಒಂದು ಜಲದ ಕುಸುಮ ಹುಟ್ಟಿ, ಹರಿಹರbಜಿಡಿಹ್ಮಾದಿಗಳಿಗೆ ವಶವಲ್ಲ ನೋಡಾ. ಕುಸುಮದ ಎಸಳಿನ ಕೂಟಸ್ಥಲದಲ್ಲಿ ಕಪ್ಪು, ನಡುಮಧ್ಯದಲ್ಲಿ ತಮ ಕಪೋತವರ್ಣ, ಅದರ ತುದಿಯಲ್ಲಿ ನಾನಾ ವರ್ಣದ ಛಾಯೆ ಕೂಡಿ ಅಳಿವುತ್ತಿಹುದು. ಆ ಹೂವ ಒಂದೆ ಭೇದದಲ್ಲಿ ಕಿತ್ತು ಸದಾಶಿವಲಿಂಗದ ಪಾದದಲ್ಲಿರಿಸಲಾಗಿ, ಪದಕ್ಕೆ ಹೊರಗೆಂದು ಮಕುಟದ ಮೇಲೇರಿತ್ತು. ಇದು ಬಲ್ಲವರಾರು ಚೋದ್ಯವ ಹೇಳಿರಣ್ಣಾ!
ಉರಿಯ ಸಿರಿಯ ನಡುವೆ ಒಂದು ಸರೋವರದಲ್ಲಿ ನರಿ ತಿರುಗಾಡುತ್ತದೆ. ಬಾಲ ಉಡುವಿನಂದ, ನಡು ಬಳ್ಳುವಿನ ಚೊಲ್ಲೆಹದಂದ, ತಲೆ ಕೋಡಗದಂದ. ರೂಪು ನರಿಯಾಗಿ, ಆತ್ಮ ಕುಕ್ಕುರನಾಗಿ ಏತಕ್ಕೂ ಸಿಕ್ಕದೆ ಸರೋವರದಲ್ಲಿ ಹರಿದಾಡುತ್ತದೆ. ಅದು ಸದಾಶಿವಮೂರ್ತಿಲಿಂಗವನರಿದವರಿಗಲ್ಲದೆ ಸಿಕ್ಕದು ಜೀವ.