ಪೃಥ್ವಿಜ್ಞಾನ ಪಿಪೀಲಿಕಾಸಂಬಂಧವಾಗಿಹುದು,
ಅಪ್ಪುಜ್ಞಾನ ಮರ್ಕಟಸಂಬಂಧವಾಗಿಹುದು,
ತೇಜಜ್ಞಾನ ಅಗ್ನಿಸಂಬಂಧವಾಗಿಹುದು,
ವಾಯುಜ್ಞಾನ ಗಂಧಸಂಬಂಧವಾಗಿಹುದು,
ಆಕಾಶಜ್ಞಾನ ವಿಹಂಗಸಂಬಂಧವಾಗಿಹುದು,
ತಮಜ್ಞಾನ ಮಾರ್ಜಾಲಸಂಬಂಧವಾಗಿಹುದು,
ಪರಿಪೂರ್ಣಜ್ಞಾನ ಕೂರ್ಮಸಂಬಂಧವಾಗಿಹುದು,
ದಿವ್ಯಜ್ಞಾನ ಸರ್ವಮಯವಾಗಿ ನಾನಾಭೇದಂಗಳ ಭೇದಿಸುತ್ತಿಹುದು.
ಇಂತೀ ಮನಜ್ಞಾನಭರಿತನಾಗಿ ದಶಗುಣಮರ್ಕಟನ ಮೆಟ್ಟಿನಿಂದು,
ಬಟ್ಟಬಯಲ ತುಟ್ಟತುದಿಯ ಸದಾಶಿವಮೂರ್ತಿಲಿಂಗದ ಕಳೆ
ಕಳಕಳಿಸುತ್ತದೆ ಚಿತ್ತದ ನೆನಹಿನಲ್ಲಿ.