ಶಿವನಿಂದಲುದಯಿಸಿತ್ತು ವಿಶ್ವ,
ವಿಶ್ವದಿಂದಲುದಯಿಸಿತ್ತು ಸಂಸಾರ,
ಸಂಸಾರದಿಂದಲುದಯಿಸಿತ್ತಜ್ಞಾನ,
ಅಜ್ಞಾನದಿಂದಲುದಯಿಸಿತ್ತು ಮರವೆ,
ಮರವೆಯಿಂದಲುದಯಿಸಿತ್ತು ಆಸೆ,
ಆಸೆಯಿಂದಲುದಯಿಸಿತ್ತು ರೋಷ,
ರೋಷದಿಂದಲುದಯಿಸಿತ್ತು ದುಃಖ,
ದುಃಖದಿಂದ ಮೂರೂ ಲೋಕವೆಲ್ಲವು ಮೂರ್ಛೆಯಾಗಿ
ಭವಬಂಧನಕ್ಕೊಳಗಾದರು,
ಅಲ್ಲಿ ನಮ್ಮ ಸದಾಶಿವಮೂರ್ತಿಲಿಂಗವನರಿಯದ ಕಾರಣ.