ವೇದಪಾಠಕ ಶಾಸ್ತ್ರವಿತ್ತು ಪುರಾಣಬಹುಶ್ರುತಿವಂತ ವಾಚಕ
ಆಡಂಬರಭೇದಕ ಸಂಸ್ಕೃತ ಪ್ರಾಕೃತ ಅಪಭ್ರಂಶಿಕ ದೇಶಿಕ
ಇವು ಮೊದಲಾದ ವಾಚಕ ಚಾರ್ವಾಕ ಮುಖಂಗಳಿಂದ
ಹೋರುವ ಮಾಯಾವಾದದ ತೆರದವನಲ್ಲ.
ಮೂಲಸಿದ್ಧಿ ರಸಸಿದ್ಧಿ ಅಂಜನಸಿದ್ಧಿ ಅದೃಶ್ಯೀಕರಣ ಕಾಯಸಿದ್ಧಿ
ಇಂತೀ ಕುಟಿಲಂಗಳ ತೆರಕ್ಕಗೋಚರ, ಅಪ್ರಮಾಳ,
ಅಂಗಲಿಂಗಸಂಬಂಧವಾದ ಶರಣನ ಇರವು ಎಂತೆಂದಡೆ:
ಶಬ್ದ ಹತ್ತದ ಅಲೇಖದಂತೆ, ಅನಿಲ ಮುಟ್ಟದ ಕುಂಪಟೆಯಂತೆ,
ಶ್ರುತಿ ಮುಟ್ಟದ ಕಡ್ಡಿಯಂತೆ, ಕೈಮುಟ್ಟದ ಗತಿಯಂತೆ,
ನೆಯಿ ಮುಟ್ಟದ ದುಗ್ಧದಂತೆ, ಪವನ ಮುಟ್ಟದ ಪರ್ಣದಂತೆ
ಭಾವ ಭ್ರಮೆಯೊಳಗಿದ್ದು ಇಲ್ಲದ ಶರಣನ ಇರವು,
ಸದಾಶಿವಮೂರ್ತಿಲಿಂಗದ ಅಂಗವು ತಾನೆ.