ಅನಾದಿಯಿಂದತ್ತಲಾದ ಅಂತರಾದಿಮಧ್ಯದಲ್ಲಿ,
ನಿಜಸ್ವರೂಪ ನಿಃಕಲ[ವಸ್ತು ಜಗಲೀ]ಲಾಭಾವಿಯಾಗಿ
ತ್ರಿಗುಣಾತ್ಮಕವಾದ ಭೇದಪೂರ್ವಕ ಮುಂತಾದ
ಷಡ್ದರ್ಶನದಲ್ಲಿ ವಿವರಂಗಳಿಗೆ,
ಶೈವ ವೈಷ್ಣವ ಉಭಯಂಗಳಲ್ಲಿ ಶೈ[ವರಾರು], ವೈಷ್ಣವರಾರು,
ಇಂತೀ ಉಭಯರಲ್ಲಿ ಅಡಗುವ ಗುಣ ವಿವರ:
ಶೈವಕ್ಕೆ ಮೂರು, ವೈಷ್ಣವಕ್ಕೆ ಮೂರು,
ಉಭಯನಾಮ ಕುಲಲಯ[ವಹಲ್ಲಿ]
ಶೈವಕ್ಕೆ ದಹನ, ವೈಷ್ಣವಕ್ಕೆ ಸಮಾಧಿ
ಶರೀರದಹನ ಮುಖವೆಲ್ಲವೂ ರುದ್ರತತ್ವಾಧೀನವಾಗಿಹುದು.
ಶರೀರ ಮುಖ ಸಮಾನಧಿ ಆಧೀನಫವಾಗಿಹುದೆಲ್ಲವೂ ವಿಷ್ಣುಪಕ್ಷವಾಗಿಹುದು.
ಇಂತೀ ಉಭಯಲಯವನರಿತಲ್ಲಿ ಪೂರ್ವಕಕ್ಷೆಯಾಗಿಹುದು.
ಇಂತೀ ಉಭಯವ ಮರೆತಲ್ಲಿ ಉತ್ತ[ರಕಕ್ಷೆಯಾಗಿ]ಹುದು.
ಇಂತೀ ಭೇದಂಗಳರಿತು
ಹೊರಗಾಗಿ ನಿಂದಲ್ಲಿ,
ಸದಾಶಿವಮೂರ್ತಿಲಿಂಗದರಿವು ಒಳಗಾಯಿತ್ತಾಗಿಹುದು.