ಅ
(46)
ಆ
(22)
ಇ
(24)
ಈ
(4)
ಉ
(3)
ಊ
(0)
ಋ
(0)
ೠ
(0)
ಎ
(54)
ಏ
(2)
ಐ
(0)
ಒ
(10)
ಓ
(1)
ಔ
(0)
ಅಂ
(15)
ಅಃ
(15)
ಕ
(42)
ಖ
(1)
ಗ
(33)
ಘ
(7)
ಙ
(0)
ಚ
(8)
ಛ
(1)
ಜ
(17)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(33)
ಥ
(0)
ದ
(7)
ಧ
(2)
ನ
(46)
ಪ
(34)
ಫ
(1)
ಬ
(25)
ಭ
(14)
ಮ
(29)
ಯ
(1)
ರ
(3)
ಱ
(0)
ಲ
(13)
ವ
(13)
ಶ
(41)
ಷ
(1)
ಸ
(55)
ಹ
(26)
ಳ
(0)
ವಚನಕಾರ: ಷಣ್ಮುಖಸ್ವಾಮಿ
ಅಂಕಿತ ನಾಮ: ಅಖಂಡೇಶ್ವರ
ಕಾಲ:
ದೊರಕಿರುವ ವಚನಗಳು: 717 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ: ಮಲ್ಲಪ್ಪ ಶೆಟ್ಟಿ ಮತ್ತು ದೊಡ್ಡರೊಂಬೆ
ಹುಟ್ಟಿದ ಸ್ಥಳ: ಜೇವರಗಿ, ಕಲಬುರ್ಗಿ ಜಿಲ್ಲೆ
ಪರಿಚಯ: ವಚನ ವಾಗ್ಮಯದ ಮೂರನೆ ಘಟ್ಟದ ಪ್ರಮುಖರಿವರು, ಸಂಸ್ಕøತ-ಕನ್ನಡಗಳೆರಡರಲ್ಲೂ ಸಮಾನ ಪಾಂಡಿತ್ಯವಿದ್ದವರು, ನಿಶ್ಚಿತ ಶಾಸ್ತ್ರಜ್ಞಾನ ಯೋಗಸಿದ್ಧಿ, ಅನುಭಾವದ ದಿವ್ಯ ತೇಜಸ್ಸನ್ನು ಹೊಂದಿದ್ದಿಇವರು ಜೇವರಗಿ ವಿರಕ್ತಮಠದ ಅಧಿಪತಿಗಳಾಗಿ ವಚನಗಳನ್ನು ಸ್ಥಲಾನುಸರಿಯಾಗಿ ಬರೆದಿರುವರು, ಇವರ ವಚನಗಳು ಮುಖ್ಯವಾಗಿ ಷಟ್ಸ್ಥಲ ತತ್ತ್ವವನ್ನು ನಿರೂಪಿಸುತ್ತದೆ. ಈ ತತ್ತ್ವಗಳು ಪರಂಪರೆಯ ಜಾಡಿನಲ್ಲಿ ಹೆಚ್ಚು ವ್ಯವಸ್ಥಿತವಾಗಿ ಬಂದಿದೆ. ಒಟ್ಟು 14 ಸ್ಥಲಗಳಲ್ಲಿ ವಚನಗಳು ವಿಂಗಡಣೆಗೊಂಡಿವೆ. ಅವರ ವಚನಗಳಲ್ಲಿ ಅನುಭಾವ ತತ್ತ್ವ- ಸಾಹಿತ್ಯ ಮುಪ್ಪರಿಗೊಂಡಿದೆ.
ಭವಕ್ಕೆ ಬೀಜವಾದುದು ತನುವೊ ? ಮನವೊ ? ಎಂದು ವಿವರಿಸಿ ನೋಡಲು ಮನವೆ ಕಾರಣವಾಗಿಪ್ಪುದರಿಂದೆ, ಈ ಕೆಟ್ಟಮನದ ಸಂಗದಿಂದೆ ಮತ್ರ್ಯಲೋಕದಲ್ಲಿ ಹುಟ್ಟಿ ತಾಪತ್ರಯಾಗ್ನಿಯಿಂದೆ ಕಂದಿ ಕುಂದಿ ನೊಂದು ಬೆಂದೆನಯ್ಯ. ಈ ಮನದ ಸಂಗದಿಂದೆ ಭವಭವಂಗಳಲ್ಲಿ ತೊಳಲಿ ಬಳಲಿದೆನಯ್ಯ. ಈ ಮನದ ಸಂಗದಿಂದೆ ಅನಂತ ಮರವೆಯ ಚೋಹಂಗಳಲ್ಲಿ ಸೆರೆಸಿಕ್ಕಿದೆನಯ್ಯ. ಈ ಮನದ ಸಂಗವ ಬಿಡಿಸಿ ನಿಮ್ಮ ನೆನಹಿನ ಸಂಗದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.
ಭಾವವಿಲ್ಲದ ಬಯಲಮೂರ್ತಿಯಾದವ ಭಕ್ತ. ಆ ಭಕ್ತನ ಹೃದಯದಲ್ಲಿ ಮೂರ್ತಿಗೊಂಡಾತ ಜಂಗಮ. ಆ ಜಂಗಮದ ಅಂಗೈಯೊಳಿರ್ಪುದು ಲಿಂಗ. ಆ ಲಿಂಗದ ಗರ್ಭದೊಳಗೆ ಸಕಲ ಸ್ಥಲಕುಳಂಗಳಿರ್ಪವು ನೋಡಾ ಅಖಂಡೇಶ್ವರಾ.
ಭಕ್ತನ ನಡೆ ಶುದ್ಧ , ಭಕ್ತನ ನುಡಿ ಶುದ್ಧ , ಭಕ್ತನ ತನು ಶುದ್ಧ , ಭಕ್ತನ ಮನ ಶುದ್ಧ , ಭಕ್ತನ ಭಾವ ಶುದ್ಧ , ಭಕ್ತನ ಸರ್ವಕ್ರಿಯೆಯೆಲ್ಲ ಶುದ್ಧ ಅಖಂಡೇಶ್ವರಾ, ನೀ ಒಲಿದ ಸದ್ಭಕ್ತನ ಕಾಯವೇ ಕೈಲಾಸವಯ್ಯ.
ಭಾವವೇ ಬ್ರಹ್ಮವಾದ ಬಳಿಕ ಇನ್ನಾವ ವೇಷವ ತೊಡಲೇತಕೋ ? ತನುವೇ ಲಿಂಗವಾದ ಬಳಿಕ ಆವ ಫಲಪದದ ಹಂಗೇತಕೊ ? ಮನದಲ್ಲಿ ತನಗೆ ತಾನೆ ಸ್ವಾತ್ಮಜ್ಞಾನ ಉದಯವಾದ ಬಳಿಕ ಇನ್ನು ಹಲವು ಶಾಸ್ತ್ರವನೋದಿ ತಿಳಿಯಬೇಕೆಂಬ ಸಂದೇಹವೇತಕೊ ? ಒಳಹೊರಗೆ ಸರ್ವಾಂಗದಲ್ಲಿ ಮಹಾಜ್ಞಾನವೆ ತುಂಬಿದ ಬಳಿಕ ಮುಂದೆ ಮುಕ್ತಿಯ ಪಡೆಯಬೇಕೆಂಬ ಭ್ರಾಮಕವೇತಕೊ ? ಇದು ಸತ್ಯದ ನಡೆಯಲ್ಲ ; ಶರಣರ ಮೆಚ್ಚಲ್ಲ ; ನಮ್ಮ ಅಖಂಡೇಶ್ವರನ ಒಲುಮೆ ಮುನ್ನವೆ ಅಲ್ಲ.
ಭಕ್ತಿಯ ಮರ್ಮವನರಿಯೆ, ಜ್ಞಾನದ ಕುರುಹನರಿಯೆ, ವೈರಾಗ್ಯದ ದೃಢವನರಿಯೆ, ವಿರತಿಯ ಹೊಲಬನರಿಯೆ, ಮುಕ್ತಿಯ ಪಥವನರಿಯೆ, ಭಕ್ತಿ ಜ್ಞಾನ ವೈರಾಗ್ಯ ವಿರತಿಗಳಿಂದೆ ಮುಕ್ತರಾದ ಮಹಾಶರಣರ ತೊತ್ತಿನ ಮಗ ನಾನಯ್ಯ ಅಖಂಡೇಶ್ವರಾ.