ಹಲವು ಪಥದಿಂದ ಬಂದ ಜಲ ನಿಲುವುದೊಂದು
ಸ್ಥಾಯಿಯಾಗಿ,
ಕಟ್ಟು[ವಡೆ]ದಲ್ಲಿ ಒಂದೆ ದ್ವಾರದಿಂದ ಸೂಸಿ
ಹಲವು ಸ್ಥಲಂಗಳ ಬೆಳೆಗೆ ಹೊಲಬಾದುದಾಗಿ.
ಇಂತೀ ಗುಣದಲ್ಲಿ ನಾನಾ ವಿವರ:
ಇಂದ್ರಿಯಂಗಳನೊಂದುಗೂಡಿ, ಸತ್ಕ್ರೀಮಾರ್ಗಂಗಳೆಂಬ
ಘಟತಟಾಂಕಗಳಲ್ಲಿ ವಿಶ್ರಮಿಸಿ,
ಏಕಚಿತ್ತದಲ್ಲಿ ನಾನಾ ಸ್ಥಲಂಗಳನಾರೋಪಿಸಿ,
ವಿಶ್ವಸ್ಥಲಂಗಳಲ್ಲಿ ಪರಿಪೂರ್ಣವಾಗಿ,
ವಸ್ತುವನೊಡಗೂಡಿಪ್ಪುದು ಕ್ರಿಯಾಪಿಂಡ ಜ್ಞಾನಪಿಂಡವಾದ ಭೇದ.
ಉಭಯಲೇಪವಾದಲ್ಲಿ ಪಿಂಡಜ್ಞಾನ, ಜ್ಞಾನಲೇಪವಾದಲ್ಲಿ ಶಬ್ದಮುಗ್ಧ,
ಸದ್ಯೋಜಾತಲಿಂಗದಲ್ಲಿ ಐಕ್ಯಭಾವ.