ಧರಿತ್ರಿಯಲ್ಲಿ ಹರಿವ ಜಲ
ತನಗೆ ಭೇದವಲ್ಲುದುದ ಭೇದಿಸಿ ಹರಿಯದಾಗಿ,
ಮರ್ಕಟನ ಲಂಘನ ಚಿತ್ತಕ್ಕೆ ಎಟ್ಟದುದನೊಲ್ಲದಾಗಿ,
ಮೆತ್ತದ ಹೇತುವಿನಲ್ಲಿದ್ದ ದಂಷ್ಟ್ರ ಚಿತ್ತವೆದ್ದಠಾವಿಗೆ ಜಂಘೆಯ ತೂಗಿ,
ಜಡನಾದಡೆ ಚಿತ್ತವತ್ತಬಿಟ್ಟು ಇಪ್ಪುದರಿಂದ ಕಡೆಯ ನಿಮ್ಮ ವಿರಕ್ತಿ?
ಇದು ಜ್ಞಾನಹೇಯಭಾವ,
ಇದು ದೃಷ್ಟ ಸದ್ಯೋಜಾತಲಿಂಗವನರಿವುದಕ್ಕೆ.