ಮರನನೇರದೆ ಹಣ್ಣು ಕೊಯ್ಯಬಹುದೆ?
ಕುಸುಮವಿಲ್ಲದೆ ಗಂಧವ ಮುಡಿಯಬಹುದೆ?
ಉಪದೃಷ್ಟವಿಲ್ಲದೆ ನಿಜದೃಷ್ಟವ ಕಾಣಬಹುದೆ?
ಕ್ರೀಶ್ರದ್ಧೆಯಿಲ್ಲದೆ ತ್ರಿವಿಧಕರ್ತೃ ತನಗೆ ಸಾಧ್ಯವಪ್ಪುದೆ?
ಇದು ಕಾರಣ ಗುರುವಿನಲ್ಲಿ ಸದ್ಭಾವ, ಲಿಂಗದಲ್ಲಿ ಮೂರ್ತಿಧ್ಯಾನ,
ಜಂಗಮದಲ್ಲಿ ತ್ರಿವಿಧಮಲದೂರಸ್ಥನಾಗಿಪ್ಪುದು,
ಸದ್ಭಕ್ತನಂಗ, ಚಿದ್ಘನವಸ್ತುವಿನ ಸಂಗ, ಸದ್ಯೋಜಾತಲಿಂಗಕ್ಕೆ ಸುಸಂಗ.