ವಮನವ ಮಾಡಿದ ಅಪೇಯವ ಕ್ಷುಧೆಯಾಯಿತೆಂದು ಮುಟ್ಟುದು ಕುನ್ನಿ.
ಅಮಲವಸ್ತು ತ್ರಿವಿಧವ ಮಲವೆಂದು ಕಳೆದು, ಮತ್ತಾಗೆ ತಲೆದೋರಿ,
ಲಿಂಗ ಮುಂತಾಗಿ ಕೊಟ್ಟುಕೊಳಬಹುದೆಂದು ಸಂದೇಹವನಿಕ್ಕಬಹುದೆ?
ಬಿಟ್ಟೆನೆಂಬ ಭ್ರಾಮಕವಿಲ್ಲದೆ, ಹಿಡಿದಲ್ಲಿ ಕಲೆದೋರದೆ,
ಸುಖದುಃಖವೆಂಬುದನರಿಯದೆ,
ನೆರೆ ಅರಿದು ಹರಿದು, ಆ ಹರಿದರಿವೆ ಕರಿಗೊಂಡು ನಿಂದಲ್ಲಿ
ಆತ ಉಂಡು ಉಪವಾಸಿಯಪ್ಪ, ಬಳಸಿ ಬ್ರಹ್ಮಚಾರಿಯಪ್ಪ,
ಸದ್ಯೋಜಾತಲಿಂಗದಲ್ಲಿ ಉಭಯವಳಿದ ಶರಣ.