ಪೂರ್ವದಿಂದ ಉತ್ತರಕ್ಕೆ ಬಂದ ಸೂರ್ಯನು ಅಸ್ತಮಯವಾಯಿತ್ತೆಂದು ಜಾಹ್ಯಗೆ ಒಡಲಾಗಿ, ಮತ್ತಾ ವರುಣಪ್ರದಕ್ಷಿಣದಿಂದ ಬಂದು ಪೂರ್ವದಲ್ಲಿ ಹುಟ್ಟಲಿಕ್ಕೆ ನಿನ್ನಿಂಗೆ ಇಂದಿಂಗೆಯೆಂಬುದು ಒಂದೊ ಎರಡೊ ? ಅಂದಿಗೆ ಜಾÕನ, ಇಂದಿಗೆ ಮರವೆ, ಎಂಬುದು ಒಂದೊ ಎರಡೊ ? ಅದು ಘಟದ ಪ್ರವೇಶದಿಂದ. ಪೂರ್ವ ಉತ್ತರಕ್ಕೆ ಬಂದಾತ್ಮನನರಿದು ಉಭಯವ ತಿಳಿದು ಸಂದು ನಾಶನವಾದಲ್ಲಿ ಸದ್ಯೋಜಾತಲಿಂಗವು ವಿನಾಶವಾದ.
ಪೃಥ್ವಿಯಲ್ಲಿ ಅಪ್ಪು ಕೂಡಲಿಕ್ಕೆ ಅಗ್ನಿ ಕೂಡಿ ನಾಲ್ಕು ಭೇದವಾಗಿಪ್ಪುದು. ಆ ಅಗ್ನಿಯಲ್ಲಿ ವಾಯು ಕೂಡಿ ಏಳು ಭೇದವಾಗಿಪ್ಪುದು. ಆ ವಾಯುವಿನಲ್ಲಿ ಆಕಾಶ ಕೂಡಿ ಹದಿನಾರು ಭೇದವಾಗಿಪ್ಪುದು. ಇಂತೀ ಪೃಥ್ವಿಯ ಭೇದ, ಅಪ್ಪುವಿನ ಸರ್ವಸಾರ, ಅಗ್ನಿಗೆ ತನ್ಮಯ ಜಿಹ್ವೆ, ವಾಯುವಿಗೆ ಸರ್ವಗಂಧ, ಆಕಾಶಕ್ಕೆ ಆವರಣ ಅಲಕ್ಷ, ಇಂತೀ ಪಂಚೀಕರಣಂಗಳ ವಿಭಾಗಿಸಿ ಸೂತ್ರವಿಟ್ಟು ಒಂದರಿಂದ ಹಲವು ಲೆಕ್ಕವ ಸಂದಣಿಸುವಂತೆ, ಲೆಕ್ಕವ ಹಲವ ಕಂಡು ಒಂದರಿಂದ ವಿಭಾಗಿಸಿದರೆಂಬುದನರಿದು ತಾಯ ಗರ್ಭದ ಶಿಶು ಭಿನ್ನವಾದಂತೆ ಸುಖದುಃಖವ ವಿಚಾರಿಸಬೇಕು. ಸದ್ಯೋಜಾತಲಿಂಗವೆಂದರಿವನ್ನಕ್ಕ ಉಭಯವ ವಿಚಾರಿಸಬೇಕು
ಪರುಷರಸ ನಿರ್ಧರವಾದಲ್ಲಿ ಹೇಮವ ವೇಧಿಸಿ, ಹೇಮವಳಿದು ಪರುಷ ತಾನಾಗಬಲ್ಲಡೆ ಅದು ಪರುಷರಸಿದ್ಧಿ. ಗುರು ಮುಟ್ಟಿದ ಶಿಷ್ಯ ಗುರುವಾಗಬಲ್ಲಡೆ, ಲಿಂಗ ಮುಟ್ಟಿದ ಆತ್ಮ ಲಿಂಗವಾಗಬಲ್ಲಡೆ, ಆ ಅರಿವು ಅರಿವ ಭೇದಿಸಿದಂತೆ, ದೃಗ್ದೈಶ್ಯಕ್ಕೆ ಒಡಲು ಏಕವಾಗಿ ಕಾಬಂತೆ. ಆ ಗುಣ ಸದ್ಯೋಜಾತಲಿಂಗವ ಕೂಡಿದ ಭೇದ.
ಪರುಷರಸ ಲೋಹವ ವೇಧಿಸಬಲ್ಲುದಲ್ಲದೆ ಹೇಮವ ವೇಧಿಸಬಲ್ಲುದೆರಿ ಅದು ಲೋಹಕ್ಕೆ ಅರಸಲ್ಲದೆ ಹೇಮಕ್ಕೆ ಅರಸಲ್ಲ. ಇಂತೀ ಉಭಯಸ್ಥಲ. ಅಂಗ ಲಿಂಗವಾಗಬಲ್ಲಡೆ, ಲಿಂಗ ಅಂಗವ ಗ್ರಹಿಸಬಲ್ಲಡೆ ಅದು ಸದ್ಯೋಜಾತಲಿಂಗದ ಕೂಟ.