ಹ ಪದದಿಂದ ಪ್ರಾರಂಭವಾಗುವ ವಚನಗಳು:
ಹಾವ ಹೊತ್ತುಕೊಂಡು ಹೋಗುತ್ತ ಹಾವಾಡಿಗನಡೆಯಲ್ಲಿ ಹಾವ ಕಂಡು ಮರಳುವಗಾವಿಲತನವ ನೋಡಾ!ತನ್ನಿಂದನ್ಯವೆಂದಡೆ ಬ್ಥಿನ್ನ ವ್ಯತಿಕರವಾಯಿತ್ತು.ತನ್ನ ಪರಮಾರ್ಥ ತನ್ನಲ್ಲಿಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗಮಾಯಾಮರ್ಕಟ, ಜಡವೆ!
ಹಂದಿ ಹೈನವಲ್ಲ! ಸಂಸಾರಿ ಜಂಗಮವಲ್ಲಸಂಸಾರಿ ಜ್ಞಾನಿಗೂ ನಿರಾಭಾರಿ ಹೆಡ್ಡತನಕ್ಕೂ ಸರಿಯೆನ್ನಬಹುದೆ?ಸಿಮ್ಮಲಿಗೆಯ ಚೆನ್ನರಾಮಾ!
ಹೆಡತಲೆಯ ಮಾತ ಬಲ್ಲಡೆ ಪ್ರಸಾದಿ.ನಡುನೆತ್ತಿಯ ಮರ್ಮವನರಿದಡೆ ಪ್ರಸಾದಿ.ಕಂಗಳ ಮೊಲೆ ಕೂರ್ಮನ ಆಪ್ಯಾಯನವ ಬಲ್ಲಡೆ ಪ್ರಸಾದಿ.ಅಂಗೇಂದ್ರಿಯವನೊಂದು ಮುಖವ ಮಾಡಬಲ್ಲಡೆ ಪ್ರಸಾದಿ.ನಿರಂಜನ ಜಂಗಮನನಾರೋಗಿಸಬಲ್ಲಡೆ ಪ್ರಸಾದಿ.ನಿರಾಲಂಬ ಪ್ರಣವಮನುಚ್ಚರಿಸಬಲ್ಲಡೆ ಪ್ರಸಾದಿ.ಹ್ರೀಂ ಶಕ್ತ್ಯಾರೂಢನಾದ ಚರಪಾದಾಂಬುವಹ್ರೈಂಶಕ್ತಿ ಬದ್ಧನಾದ ಲಿಂಗಕ್ಕೆ ಶಾಂತಿಯ ಮಾಡಬಲ್ಲಡೆ ಪ್ರಸಾದಿ.ಆಧಾರ ಬ್ರಹ್ಮದೊಳಗೆ ಅಡಗಿದ ಅಕ್ಷರವ ನೋಡಿ ಓದಬಲ್ಲಡೆ ಪ್ರಸಾದಿ.ಭಾವವ ಕ್ರೀಯಲ್ಲಿ ತಂದು ಭಾವದಲ್ಲಿ ನೆಲೆಗೊಳಿಸಬಲ್ಲಡೆ ಪ್ರಸಾದಿ.ಒಳಹೊರಗೆಂಬ ಭಾವಗೆಟ್ಟು ಸುಳುಹಿನ ಪ್ರಸಾದದಕಳೆವೆಳಗ ನುಂಗಿದ ಲಿಂಗಕ್ಕೆ ಅರ್ಪಿಸಿ ಸುಖಿಸಬಲ್ಲಡೆ ಪ್ರಸಾದಿ.ಸ್ಥಾವರವ ಜಂಗಮದೊಳಡಗಿಸಿಜಂಗಮವ ಸ್ಥಾವರವ ಮಾಡಬಲ್ಲಡೆ ಪ್ರಸಾದಿ.ಇದು ಕಾರಣ ನಿಜಗುಣನೆಂಬ ಮಹಾಜಂಗಮನಿಜಾನಂದವೆಂಬ ಒಕ್ಕುಮಿಕ್ಕ ಘನಪ್ರಸಾದವ ಕೊಟ್ಟನಾಗಿಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವೆನ್ನಹಿಂಗದಾಲಿಂಗಿಸಿದನಾಗಿ ಪ್ರಸಾದಿಯಾದೆ.
ಹುಸಿಯ ವ್ಯಾಧನು ನಿಜದಿಂದ ಕ್ಷತ್ರಿಯನೆಂದು ಬೋಧಿಸಲುಬೋಧೆ ದೊರಕೊಂಬುದಲ್ಲದೆಎಲೆ ಕ್ಷತ್ರಿಯ ನೀ ವ್ಯಾಧನೆಂದು ಬೋಧಿಸಲುಬೋಧೆ ದೊರಕೊಂಬುದೆ ಹೇಳಾ!ಜೀವ ಭೋಕ್ತೃ ನಿಜ ಪರಮನೆಂದೆನ್ನದೆಪರಮನೆ ಹುಸಿ ಜೀವನೆ ದಿಟವೆಂದು ಬೋಧಿಸಲುಬೋಧೆ ದೊರಕೊಳ್ಳದು ನೋಡಾ!ಜ್ಞಾತೃ ಜ್ಞಾನ ಜ್ಞೇಯಾದಿ ಜ್ಞಪ್ತಿ ಸುಖ ಪರಿಪೂರ್ಣನಲ್ಲ``ಕೋಯಮಾತ್ಮಾನಾನೃತೋಸ್ತಿ ಯಸ್ಮಿನ್ನೇಕಮೇವಾದ್ವಿತೀಯಂ ತತ್ವಮಸಿ'ಎಂದುದು ವೇದ,ಸಿಮ್ಮಲಿಗೆಯ ಚೆನ್ನರಾಮಾ.
ಹಿರಿದಪ್ಪ ಮಾಯೆಯನೆಂತು ಕೆಡಿಸುವೆನೆಂದುಬೆಂಬೀಳದಿರು ಮರುಳೆ!ಮಾಯೆ ದಿಟಕ್ಕಿಲ್ಲ; ಇಲ್ಲದುದನೆಂತು ಕೆಡಿಸುವಿರೊ?ತನ್ನನರಿದಡೆ ಸಾಕು.ಅರಿದೆನರಿಯೆನೆಂಬುದು ಮಾಯೆ.ಈ ಮಾಯೆ ನಿನಗಿಲ್ಲ, ಚಿನ್ಮಯ ನೀನೇ,ಸಿಮ್ಮಲಿಗೆಯ ಚೆನ್ನರಾಮಾ.
ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತೆಇಲ್ಲದ ಶಂಕೆಯನುಂಟೆಂಬನ್ನಕ್ಕಅದಲ್ಲಿಯೇ ರೂಪಾಯಿತ್ತು.ಹೇಡಿಗಳನೇಡಿಸ ಕಾಡಿತ್ತುಸಿಮ್ಮಲಿಗೆಯ ಚೆನ್ನರಾಮನೆಂಬ ಭಾವದ ಗಸಣಿ.
ಹತ್ತರ ಹಸುಗೆಯಲಚ್ಚಾದ ಪರಿಗಳನೀವೆತ್ತ ಬಲ್ಲಿರೊ!ಗಣಿತದ ಗುಣತವ ನಾಲ್ಕು ಬಂದಡೆ ಖಳಐದು ಬಂದಡೆ ನಂದಿ, ಆರಾದಡೆ ಜಾಗರ,ಏಳರಲ್ಲಿ ತಿಗ,ಇದು ಜಾಣರೆಂಬವರಿಗೆ ಕನ್ನಡ,ಸಿಮ್ಮಲಿಗೆಯ ಚೆನ್ನರಾಮನೆಂಬ ಅಂಗದಲ್ಲಿ ಜೂಜುಕೊಳ್ಳದು.
ಹೇಳಿದ್ದ ಕೇಳಲೊಂದು ಶಬುದವಾಯಿತ್ತಯ್ಯ.ತೋರಿದ್ದ ಹಿಡಿಯಲೊಂದು ರೂಪಾಯಿತ್ತಯ್ಯ.ನೆಚ್ಚಿನ ಮಚ್ಚಿಕೆ ಅದು ನಿಶ್ಚಿಂತವೆಂತಪ್ಪುದು?ಸಿಮ್ಮಲಿಗೆಯ ಚೆನ್ನರಾಮಲಿಂಗನೆಂಬನ್ನಕ್ಕ.
ಹೆರದ ಮುನ್ನವೆ ಹುಟ್ಟಿಹೆತ್ತಲ್ಲಿಯೆ ಸತ್ತುದು ನೋಡಾ!ಅದು ಮಾಯದ ಕೃತಕದ ಗರ್ಭದ ನೆಳಲಿನ ಸುಳುಹು.ಆದಲ್ಲಿ ಆಯಿತ್ತು, ಹೋದಲ್ಲಿ ಹೋಯಿತ್ತು.ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗೈಕ್ಯವು.
ಹೊತ್ತುದ ಹುಸಿಮಾಡಲರಿಯದೆ ದುಃಖ ದುರ್ಮತಿ ಬಿಡದು.ಮತ್ತೆ ಸಂಸಾರಿಯಲರಸಲದೇನುಂಟು?ಜೀವನವೇನವನ ಜೀವನವೇನು?ಪ್ರಾರಬ್ಧಕ್ಕೆ ಪರಿಯಾಯವ ಮಾಡಿಬಿಟ್ಟಿಯ ನಡೆವನ ಜೀವನವೇನವನ ಜೀವನವೇನು?ಆಗಮ ನಿಗಮವನರಿಯದೆ ನಿರ್ಬುದ್ಧಿಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ ಬಾಧೆಗೆಭಾಜನವಾದವನ ಜೀವನವೇನು?