ಶ ಪದದಿಂದ ಪ್ರಾರಂಭವಾಗುವ ವಚನಗಳು:
ಶಿರವ ಸೀರೆಯ ಕರವ ಕಂಗಳ ಶಿಶುವನಿಕ್ಕಿಯೆರದರು.ಭಾಷೆ ಬಳಸಿ ಹಂಗು ಹಳಸಿಹೋಯಿತ್ತು.ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗಜಂಗಮಕ್ಕೆಕೊಟ್ಟಿಹೆನೆಂಬ ಶಬ್ದ ಅಳಿದರುಳಿಯಿತು.
ಶಿವಗಣಂಗಳ ಬರವ ಕಂಡು ಕೈಮುಗಿದು ಅಂಜಲೇಬೇಕು.ಶರಣೆನ್ನಲೊಲ್ಲದೀ ಮನವು;ಆಗಿನ ಭಕ್ತಿಯನರಿಯದು,ಬಾಗಿ ಶರಣೆನ್ನಲೊಲ್ಲದೀ ಮನವು.ಆಳ್ದನೆಂದು ನಂಬಿಯೂ ನಂಬದಾಗಿ,ಸಿಮ್ಮಲಿಗೆಯ ಚೆನ್ನರಾಮನೆನ್ನ ಕೇಡ ನೋಡಿನಗುತೈದಾನೆ.
ಶಬ್ದಾದಿ ಸಕಲ ವಿಷಯಗುಣಂಗಳ ನೀ ರಾಗ ವಿರಾಗಕಾರಣವಾಗಿಮನಸಾದಿ ಕರಣೇಂದ್ರಿಯಂಗಳೊಳಗಾದ ಜೀವನನಿವಾರಣೆಯ ಮಾಡಯ್ಯಾ.`ನಿಜಾನಂದಾನುಭಾವಸ್ಯ ಸರ್ವಸಾಕ್ಷಿಯಾನ್ ಯೋಗನಾಂ'ಎಂದುದಾಗಿ,ಇಂತು ಶಬ್ದಾದಿ ಸಕಲ ವಿಷಯಂಗಳೊಳಗಾದಜೀವನ ಮನವೆ ಸರ್ವಸಾಕ್ಷಿಯಾಗಿ ನಿಲ್ಲಬಲ್ಲಾತನೆಸಿಮ್ಮಲಿಗೆಯ ಚೆನ್ನರಾಮ ತಾನೆ.
ಶಾಂತಸುಖವಿರಲೊಲ್ಲದೆ ನೀನೇಕೆ ಭ್ರಮಿಸುವೆಯೊ?ದೇಹಧರ್ಮ ಆರ ವಶವೂ ಅಲ್ಲ.ದೇಹದಿಚ್ಛೆ ಪ್ರಾರಬ್ಧ ಉಂಡಲ್ಲದೆ ಹೋಗದು.ತನುಧರ್ಮವಿಲ್ಲದಚಲ ನೀನೇ,ಸಿಮ್ಮಲಿಗೆಯ ಚೆನ್ನರಾಮಾ.