ಗೋವಾದಿಯಾದ ಸಾಕಾರಾದಿ ಭೌತಿಕಂಗಳನತಿಗಳೆದು ನಿರಾಕಾರ ಪ್ರಾಣಾದಿಯಾದ ಮನೇಂದ್ರಿಯಂಗಳ ನೆಲೆಗಳೆದು ಅರಿವಿನರಿವಿಂದವೇ ನೋಡಿ, ಅರಿವು ಮರವೆಗಳೆರಡನು ನೇತಿಗಳೆದು ಏನೂ ಇಲ್ಲದೆ ಶೂನ್ಯವಾಗಿ ನಿಂದ ನಿಜಸ್ವರೂಪ ನೀನೇ, ಸಿಮ್ಮಲಿಗೆಯ ಚೆನ್ನಾರಾಮಾ.
ಗಗನಾದಿ ಸಾಕಾರದಜ್ಞಾನಭಾವವನತಿಗಳೆದು ಅರಿತ ಅರಿವಿಂದವೆ ನೋಡಿ, ಆ ಅರಿವನೆ ತಿಳಿದು, ಏನೂ ಅರಿಯೆನೆಂಬುದೆ ನಿಂದ ನಿಲವು. ಸಚ್ಚಿದಾನಂದ ನಿತ್ಯ ಪರಿಪೂರ್ಣ ನೀನೇ, ಸಿಮ್ಮಲಿಗೆಯ ಚಿನ್ನರಾಮಾ.