ಭಕ್ತರ ನಿರ್ಮಳ ಭಕ್ತಿ
ಏನೆಂದರಿಯದ ಯುಕ್ತಿಶೂನ್ಯನಪ್ಪ
ಅಹಂಕಾರಿ ಮರುಳನನೆಂತು ಗುರುವೆಂಬೆ?
ಪ್ರಕೃತಿಧರ್ಮವನಾತ್ಮಂಗೇರಿಸಿ ಕಾಬ
ಜಡ ನರನನೆಂತು ಗುರುವೆಂಬೆ?
ಭಾವಶುದ್ಧಿಯಾಗದೆ ಕೆಮ್ಮನೆ ತಪ್ಪುಗೊಂಬ
ಜಡ ನರನನೆಂತು ಗುರುವೆಂಬೆ?
ಶರಣರಲಿ ಗುಣದೋಷವನೇನುವರಸದೆ
ಸುಖವ ಮಾಡುವಾತನ ಗುರುವೆಂದು ನಂಬುವೆ
ಸಿಮ್ಮಲಿಗೆಯ ಚೆನ್ನರಾಮಾ.