ಸಂಸಾರವೆಂಬ ಹೇರಡವಿಯ ಅಂಧಕಾರದ,
ಜನ್ಮಪಥದ ಆಧಿವ್ಯಾದಿಗಳೆಂಬ ಗಿರಿದುರ್ಗ ಜಲದುರ್ಗಂಗಳ,
ಧನ ವನಿತೆ ವಿಷಯ ಮೃಗತೃಪ್ಣೆಯ ಬಳಿವಿಡಿದ
ರಾಗದ್ವೇಷದ ಕೊಳ್ಳೆದರಿಲುಗಳ,
ಖಗಮೃಗದ ಭಯದ,
ತಾಪತ್ರಯದ ಕಾಳುಗಿಚ್ಚಿನಲ್ಲಿ ಬೇವ ನರಗುರಿಗಳಾದ
ಸಾವ ಕೆಡುವ ಅಹಂಮಮತೆಯ ಹೊತ್ತು ನಡೆವ ಜೀವರಿಗೆ
ಭವಬಂಧನ ಹರಿದು ಗುರುಪದವಪ್ಪುದು
ನಿಜಗುಣನ ಶ್ರೀಪದವ ಶರಣುಗತಿ ಒಕ್ಕಡೆ, ನಿತ್ಯ ಸುಖಪೂರಿತ
ಸಿಮ್ಮಲಿಗೆಯ ಚೆನ್ನರಾಮ ತಾನಹ ನೆರೆ ನಂಬಿದಡೆ.