ಅ
(37)
ಆ
(14)
ಇ
(0)
ಈ
(3)
ಉ
(3)
ಊ
(2)
ಋ
(0)
ೠ
(0)
ಎ
(8)
ಏ
(1)
ಐ
(1)
ಒ
(4)
ಓ
(3)
ಔ
(0)
ಅಂ
(9)
ಅಃ
(9)
ಕ
(42)
ಖ
(0)
ಗ
(10)
ಘ
(1)
ಙ
(0)
ಚ
(0)
ಛ
(0)
ಜ
(10)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(13)
ಥ
(0)
ದ
(3)
ಧ
(0)
ನ
(16)
ಪ
(11)
ಫ
(0)
ಬ
(16)
ಭ
(8)
ಮ
(18)
ಯ
(0)
ರ
(2)
ಱ
(0)
ಲ
(7)
ವ
(9)
ಶ
(9)
ಷ
(0)
ಸ
(13)
ಹ
(12)
ಳ
(0)
ವಚನಕಾರ: ಅಂಬಿಗರ ಚೌಡಯ್ಯ
ಅಂಕಿತ ನಾಮ: ಅಂಬಿಗರ ಚೌಡಯ್ಯ
ಕಾಲ: 1160
ದೊರಕಿರುವ ವಚನಗಳು: 279 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಶಿವಪುರ (ಧಾರವಾಡ ಜಿಲ್ಲೆ) (ಚೌಡದಾನಪುರ)
ಪರಿಚಯ: ಕಾಲ; ಸು. 1160. ದೋಣಿ ನಡೆಸುವ ಕಾಯಕದವನು. ಈತನ 278 ವಚನಗಳು ದೊರೆತಿವೆ. ಕಸುಬಿನ ಅನುಭವಗಳನ್ನೇ ತನ್ನ ವಚನಗಳಲ್ಲಿ ರೂಪಕ, ನಿದರ್ಶನಗಳನ್ನಾಗಿ ಬಳಸಿಕೊಂಡಿದ್ದಾನೆ. ಧಾರ್ಮಿಕ ಜಿಜ್ಞಾಸೆ, ಜ್ಞಾನದ ಸ್ವರೂಪದಂಥ ತಾತ್ವಿಕ ಚಿಂತನೆಗಳೊಡನೆ ತೀವ್ರವಾದ ಭಾಷೆಯಲ್ಲಿ ಡಾಂಬಿಕತೆ, ಜಾತೀಯತೆಗಳನ್ನು ಟೀಕಿಸುತ್ತಾನೆ.
ವೇದವನೋದಿದವರು ವಿಧಿಗೊಳಗಾದರಲ್ಲದೆ ದೇವರಿಹರವಾವನರಿದಿಪ್ಪುದಿಲ್ಲ. ಶಾಸ್ತ್ರವನೋದಿದವರು ಸಂಶಯಕ್ಕೊಳಗಾದವರಲ್ಲದೆ ಸದ್ಗುರುವನರಿದುದಿಲ್ಲ. ಆಗಮವನೋದಿದವರೆಲ್ಲರು ಆಗುಚೇಗಿಗೆ ಒಳಗಾದರಲ್ಲದೆ ಆದಿ ಅನಾದಿಯಿಂದತ್ತಣ ಶರಣ-ಲಿಂಗ ಸಂಬಂಧವನರಿದುದಿಲ್ಲ. ಪುರಾಣವನೋದಿದವರೆಲ್ಲರು ಪೂರ್ವದ ಬಟ್ಟೆಗೊಳಗಾದವರಲ್ಲದೆ ಪೂರ್ವದ ಕರ್ಮವ ಹರಿದು ಪುರಾತನರನರಿದುದಿಲ್ಲ. ಇಂತಿವರೆಲ್ಲರು ಚರಶೇಷವ ಲಿಂಗಕ್ಕರ್ಪಿಸಲರಿಯರಾಗಿ ಇವರಿಗೆ ಲಿಂಗವು ಕಾಣಿಸದೆಂದಾತ ನಮ್ಮ ಅಂಬಿಗರ ಚೌಡಯ್ಯ.
ವಸ್ತುವ ಕಾಬರೆಲ್ಲರು ಆತ್ಮ ಹಲವು ಬಗೆ ಎಂದಡೆ, ಹಲವಾದುದುಂಟೆ? ಒಂದು ಕುಂಭದ ನೀರು ಹಲವು ರಂಧ್ರಗಳಲ್ಲಿಳಿವುದು. ಅದು ಕುಂಭದ ಭೇದವೋರಿ ಜಲದ ಭೇದವೋ? ಈ ಉಭಯ ಭೇದವ ತಿಳಿದಲ್ಲಿ ಆತ್ಮನೊಂದೆಯೆಂದನಂಬಿಗ ಚೌಡಯ್ಯ.