ಅ
(37)
ಆ
(14)
ಇ
(0)
ಈ
(3)
ಉ
(3)
ಊ
(2)
ಋ
(0)
ೠ
(0)
ಎ
(8)
ಏ
(1)
ಐ
(1)
ಒ
(4)
ಓ
(3)
ಔ
(0)
ಅಂ
(9)
ಅಃ
(9)
ಕ
(42)
ಖ
(0)
ಗ
(10)
ಘ
(1)
ಙ
(0)
ಚ
(0)
ಛ
(0)
ಜ
(10)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(13)
ಥ
(0)
ದ
(3)
ಧ
(0)
ನ
(16)
ಪ
(11)
ಫ
(0)
ಬ
(16)
ಭ
(8)
ಮ
(18)
ಯ
(0)
ರ
(2)
ಱ
(0)
ಲ
(7)
ವ
(9)
ಶ
(9)
ಷ
(0)
ಸ
(13)
ಹ
(12)
ಳ
(0)
ವಚನಕಾರ: ಅಂಬಿಗರ ಚೌಡಯ್ಯ
ಅಂಕಿತ ನಾಮ: ಅಂಬಿಗರ ಚೌಡಯ್ಯ
ಕಾಲ: 1160
ದೊರಕಿರುವ ವಚನಗಳು: 279 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಶಿವಪುರ (ಧಾರವಾಡ ಜಿಲ್ಲೆ) (ಚೌಡದಾನಪುರ)
ಪರಿಚಯ: ಕಾಲ; ಸು. 1160. ದೋಣಿ ನಡೆಸುವ ಕಾಯಕದವನು. ಈತನ 278 ವಚನಗಳು ದೊರೆತಿವೆ. ಕಸುಬಿನ ಅನುಭವಗಳನ್ನೇ ತನ್ನ ವಚನಗಳಲ್ಲಿ ರೂಪಕ, ನಿದರ್ಶನಗಳನ್ನಾಗಿ ಬಳಸಿಕೊಂಡಿದ್ದಾನೆ. ಧಾರ್ಮಿಕ ಜಿಜ್ಞಾಸೆ, ಜ್ಞಾನದ ಸ್ವರೂಪದಂಥ ತಾತ್ವಿಕ ಚಿಂತನೆಗಳೊಡನೆ ತೀವ್ರವಾದ ಭಾಷೆಯಲ್ಲಿ ಡಾಂಬಿಕತೆ, ಜಾತೀಯತೆಗಳನ್ನು ಟೀಕಿಸುತ್ತಾನೆ.
ಆದಿ ಅನಾದಿಯಿಂದತ್ತಣ ಶರಣನ ಷಡಾಧಾರಚಕ್ರದೊಳಗೆ ಷಡುಲಿಂಗವು, ಷಡುಮಂತ್ರವು, ಷಡುಭಕ್ತರು, ಷಡುಶಕ್ತಿಗಳು ಇದ್ದುವಯ್ಯ. ಆ ಶರಣನ ಜ್ಞಾನಕ್ರೀ ಅರವತ್ತುನಾಲ್ಕು ಭೇದವಾಯಿತ್ತಯ್ಯ, ಒಬ್ಬ ಶರಣನು ಅನಂತ ಶರಣರಾದುದ ಕಂಡೆನೆಂದಾತ ನಮ್ಮ ಅಂಬಿಗರ ಚೌಡಯ್ಯ.
ಆತ್ಮಂಗೆ ದಶವಾಯು ಉಂಟೆಂಬರು. ಊಧ್ರ್ವನಾಳವೈದು, ಅಧೋನಾಳವೊಂದು, ವಾಯುವೊಂದು ಭೇದ, ಆತ್ಮವೊಂದರಲ್ಲಿ ಒಡೆಯದಿದೆ, ಇದೇ ನಿರಂತರ ಸುಖ, ಎಚ್ಚರಿಕೆಯ ಕೂಟ. ಮಿಕ್ಕಾದ ನಾಲ್ಕರಲ್ಲಿ ತಿರುಗಿ ಜೀವರುಗಳ ವಾಯು ನಾಲ್ಕು ಮುಚ್ಚಿ ಅಧೋಮುಖಕ್ಕಿಳಿದಲ್ಲಿ ಕೀಳುಜೀವವೆಂದನಂಬಿಗ ಚೌಡಯ್ಯ.