ಅಥವಾ
(37) (14) (0) (3) (3) (2) (0) (0) (8) (1) (1) (4) (3) (0) ಅಂ (9) ಅಃ (9) (42) (0) (10) (1) (0) (0) (0) (10) (0) (0) (0) (0) (0) (0) (0) (13) (0) (3) (0) (16) (11) (0) (16) (8) (18) (0) (2) (0) (7) (9) (9) (0) (13) (12) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಟಂಗೆ ಬ್ಥೀತಿ ಉಳ್ಳನ್ನಕ್ಕ ರಣವ ಹೊಗಬಲ್ಲನೆ? ಬಲ್ಲವ ಅರಿಯದವರಲ್ಲಿ ಗೆಲ್ಲ ಸೋಲಕ್ಕೆ ಹೋರುವನ್ನಬರ ಬಲ್ಲವನಹನೆ? ಅರಿದು ನುಡಿಯಲಿಲ್ಲ, ಮರೆದು ಸುಮ್ಮನಿರಲಿಲ್ಲ. ಆರು ಎಂದಂತೆ ಎನಲಿಲ್ಲ ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಭೂತ ಭೂತ ಹೊಡಯಿತೆಂದು ಬಾಯಿಗೆ ಬಂದ ಹಾಗೆ ಕೆಲದಾಡಿ ಹಲಬರು ಮಂತ್ರಿಸಿ ಥೂಥೂ ಎಂದು ಉಗುಳಿ, ಛೀ ಛೀ ಎಂದು ಉಗುಳಿ, ಜರಿದು ಝಂಕಿಸಿ ಲಜ್ಜೆಗೆಡಿಸಿಕೊಂಬ ಪಾತಕ ಕರ್ಮಿಗಳಿಗ್ಯಾಕೊ ಶಿವಸ್ತೋತ್ರ, ಶಿವಭಕ್ತಿ? .................................................ಬೆಂದು ನಾರು ಬೇರು................................................................. ..............
--------------
ಅಂಬಿಗರ ಚೌಡಯ್ಯ
ಭಕ್ತ ನಂಬಿದರೆ ಕೊಪ್ಪದ ರಾಮಯ್ಯನಂತೆ ನಂಬಬೇಕಯ್ಯಾ, ಭಕ್ತ ನಂಬಿದರೆ ಕೆಂಭಾವಿ ಭೋಗಣ್ಣನಂತೆ ನಂಭೀಕಯ್ಯಾ, ಭಕ್ತ ನಂಬಿದರೆ ಚೇದಿರಾಜಯ್ಯನಂತೆ ನಂಬಬೇಕಯ್ಯಾ, ಭಕ್ತ ನಂಬಿದರೆ ಏಣಾದಿನಾಥನಂತೆ ನಂಬಬೇಕಯ್ಯಾ. ಇಂತಪ್ಪ ನಂಬಿಗೆಗೆ ತಾನು ಸರಿಯೆಂದು, ಬೀದಿಯ ಪೋರನಂತೆ ತನ್ನಯ ಮನದೊಳಗೊಂದು ಮಾತು, ಹೊರಗೊಂದು ಮಾತು, ತುದಿನಾಲಗೆಯಲ್ಲಿ ಭಕ್ತರ ನಂಬಿದೆನೆಂದು ಗಳಹುವ ಗೊಡ್ಡ ಹೊಲೆಯನ ಕಂಡೊಡೆ ಎದೆ ಎದೆಯನು ಒದ್ದೊದ್ದು ತುಳಿಯೆಂದಾತ ನಮ್ಮ ಅಂಬಿಗರ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಭಕ್ತ ಜಂಗಮದ ಪರಿಯ ಹೇಳಿಹೆನು ಕೇಳಿರಣ್ಣಾ: ಭಕ್ತರು ಜಂಗಮವಿದ್ದೆಡೆಗೆ ಹೋಗಿ, ದೀರ್ಘದಂಡ ನಮಸ್ಕಾರವಂ ಮಾಡಿ, ವಿಭೂತಿಯಂ ಕೊಟ್ಟು, ಎಲೆ ದೇವ. ನಿಮ್ಮ ತೊತ್ತು ಭೃತ್ಯನೆಂದು ಕಿಂಕುರ್ವಾಣತೆಯಂ ನುಡಿದು, ತೀರ್ಥಪ್ರಸಾದವನಿತ್ತು, ರಕ್ಷಿಸಬೇಕೆಂದು ಬಿನ್ನಪವನಿತ್ತು, ಕೊಂಡು ತನ್ನ ಗೃಹಕ್ಕೆ ಹೋಗಿ ಸಕಲಪದಾರ್ಥಂಗಳು ಆಯಿತ್ತಾದ ಬಳಿಕ ಬಂದು ನಮಸ್ಕಾರವಂ ಮಾಡಿ, ದೇವರಾಯವಾಯಿತ್ತು ಚಿತ್ತೈಸಿಯೆನೆ, ಒಳಿತೆಂದು ಆ ಜಂಗಮವು ಆ ಭಕ್ತನೊಡಗೂಡಿ ಗೃಹಕ್ಕೆ ಬಂದು ಉಲ್ಲಾಸದಿಂ ಆ ಭಕ್ತನು ಪಾದಾರ್ಚನೆಯ ಮಾಡಿ ಅಗ್ರ ಗದ್ದಿಗೆಯನಿಕ್ಕಿ ಮೂರ್ತಮಾಡಿಸಿ ಮರಳಿ ದೀರ್ಘದಂಡನಮಸ್ಕಾರಮಂ ಮಾಡಿ ತೀರ್ಥಪ್ರಸಾದಕ್ಕೆ ನಿರೂಪವೆ ಅಯ್ಯರಿ ಎಂದು ಎದ್ದು ಬಂದು ಆ ಜಂಗಮಕ್ಕೆ ನಮಸ್ಕರಿಸಿ ದಿವ್ಯಪಾದಮಂ ಪಿಡಿದು, ಸಾಕ್ಷಿ: ದೇಶಿಕಂ ಚರಣಾಂಗುಷ*ಂ[ಭಸಿ]ತಂ ಪ್ರಣಾಮಸ್ತಥಾ ಪಾದಪೂಜಾಮಿಮಾಂ ಕುರ್ಯಾತ್ ಗೋಪ್ಯಂ ಗೋಪ್ಯಂ ವರಾನನೇ ಎಂದು ವಿಭೂತಿಯಂ ಧರಿಸಿ, ಪತ್ರಿಪುಷ್ಪಗಳಿಂದ ಪೂಜೆಯಂ ಮಾಡಿ ತಾಂಬೂಲ ನೆನೆಗಡಲಿ ಮುಖ್ಯವಾದ ಫಲಾಹಾರಂಗಳನರ್ಪಿಸಿ ಪ್ರದಕ್ಷಿಣವಂ ಮಾಡಿ, ಸ್ತುತಿಸಿ, ನಮಸ್ಕರಿಸಿ ಹಸ್ತಪರುಶಮಂ ಮಾಡಿಕೊಂಡು, ಸಕಲಪದಾರ್ಥಂಗ[ಳ] ನೀಡಿ, ವಿಭೂತಿಯಂ ಮುಂದಿಟ್ಟು ನಮಸ್ಕರಿಸಿ ಕರವಂ ಮುಗಿದು ನಿಲ್ಲುವುದು ಭಕ್ತನಿಗೆ ಕರ್ತವ್ಯ. ಇನ್ನು ಜಂಗಮದ ಪರಿಯ ಹೇಳಿಹೆನು ಕೇಳಿರಣ್ಣಾ: ಜಂಗಮವೆ ಪರಾತ್ಪರ, ಜಂಗಮವೆ ಪರವಸ್ತು, ಇಂತಪ್ಪ ಜಂಗಮ ಭಕ್ತನ ಮೇಲಣ ಕರುಣದಿಂ ತೀರ್ಥವನಿತ್ತ ಬಳಿಕ ತಮ್ಮಿಷ್ಟಲಿಂಗ[ಕ್ಕೆ] ಕೊಟ್ಟುಕೊಂಬುದೆ ಜಂಗಮಕ್ಕೆ ಕರ್ತವ್ಯ. ಸಾಕ್ಷಿ: ಜಂಗಮಂ ಪರಾತ್ಪರಂ ಪಾದಾಂಗುಷ* ತೀರ್ಥಂ ತಥಾ ಸ್ವಯಂ ಲಿಂಗಾರ್ಪಿತ ಪೀತ್ವಾ ಜಂಗಮಃ ಪರಮೇಶ್ವರಃ ಮತ್ತಂ ಸ್ವಪಾದೋದಕ ತೀರ್ಥಾಂ ಚ ಸ್ವಲಿಂಗಸ್ಯ ಸಮರ್ಪ[ಣಂ] ಕೃತ್ವ್ಯಾ ವಿಭೇದವದ್ಭಕ್ತ್ಯಾ ಅರ್ಪಣೀಯಮನಂತರಂ ಇಂತೆಂಬ ಶ್ರುತ್ತ್ಯರ್ಥವನರಿಯದೆ ಬೇರೆ ತನಗೊಂದೆಡೆಯೆಂದು ಗೊಣಸೆ ತೆಗೆದುಕೊಂಡು ಎಡೆಮಾಡು ಭಕ್ತಾ ಎಂಬುದು ಜಂಗಮಕ್ಕೆ ಕ್ರಮವೆ? ಅಲ್ಲ. ಅದು ಗಣಸಮೇಳಕ್ಕೆ ಅಲ್ಲದ ಮಾತು. ಆತನ ಮಾತ ಕೇಳಿ ಎಡೆಮಾಡುವಾತ ಭಕ್ತನೆ? ಅಲ್ಲ. ಇವರಿಬ್ಬರ ಮುಖವ ನೋಡಲಾಗದೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಕೊರಳಿಗೆ ಕವಡೆಯ ಕಟ್ಟಿ ನಾಯಾಗಿ ಬೊಗಳುವರು! ಅದಾವ ವಿಚಾರವಯ್ಯ? ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಬೇವಿನುಡಿಗೆಯನುಟ್ಟು ಹಡಲಿಗೆಯ ಹೊತ್ತು `ಉಧೋ ಉಧೋ ಎಂಬರು! ಅದಾವ ವಿಚಾರವಯ್ಯ? ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಹಗ್ಗಹುರಿ-ಬೆನ್ನಸಿಡಿ-ಬಾಯಬೀಗದಲ್ಲಿ ಹೋಗುವರು! ಅದಾವ ವಿಚಾರವಯ್ಯ? ಇಂಥ ಭವಿಮಾರ್ಗದಲ್ಲಿ ಚರಿಸುವ ಶಿವದ್ರೋಹಿಗಳಿಗೆ ಲಿಂಗಧಾರಣವ ಮಾಡುವನೊಬ್ಬ ಗುರುದ್ರೋಹಿ, ಅವರಿಗೆ ಚರಣೋದಕವ, ತಾ ಧರಿಸುವ ವಿಭೂತಿ-ರುದ್ರಾಕ್ಷಿಯ ಕೊಡುವನೊಬ್ಬ ಲಿಂಗದ್ರೋಹಿ! ಅವನು ಭಕ್ತನೆಂದು ಅವನ ಮನೆಯ ಹೊಕ್ಕು, ಮಂತ್ರವ ಹೇಳಿ, ಅನ್ನವ ತಿಂದವನೊಬ್ಬ ಜಂಗಮದ್ರೋಹಿ! ಇಂತೀ ನಾಲ್ವರಿಗೆ ಸೂರ್ಯಚಂದ್ರರುಳ್ಳನ್ನಕ್ಕ ಎಕ್ಕಲಕೊಂಡದಲ್ಲಿಕ್ಕದೆ ಮಾಣ್ಬನೆ ಅಂಬಿಗರ ಚೌಡಯ್ಯನು?
--------------
ಅಂಬಿಗರ ಚೌಡಯ್ಯ
ಭೋಗಕ್ಕೆ ಸಾಧನದ್ರವ್ಯ ಬಂದರೆ ಬೇಗ ಬೇಗ ಸಂಭ್ರಮಿಸುವರು, ಬಾರದಿರ್ದರೆ ಕಂದುವರು ಕುಂದುವರು. ಈ [ಉ]ಭಯದ ಸಂದಿನಲ್ಲಿ ಸಿಕ್ಕಿ ದಂದುಗಕ್ಕೊಳಗಾಗಿ ಸಂದ[ಣಿ]ಗೊಂಬಾತಗೆಂದೆಂದಿಗೂ ಸಂಸಾರ ಬಿಡದು. ಬೆಂದೊಡಲಿಗೇಕೆ ಈಸು ಸಡಗರವೆಂದಾತ ನಮ್ಮಂಬಿಗರ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಭೇದವ ಭೇದಿಸುವ ಚಿತ್ತವ, ನಾದಬಿಂದು ಕಳೆಗೆ ಅತೀತವಪ್ಪ ಆತ್ಮನ, ಅಡಗಿ ರಂಜಿಸುವ ಠಾವ ಕುರುಹುಗೊಂಡವನ ಯೋಗಿಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಭವವಿರಹಿತಂಗೆ ಕರ್ಮಂಗಳ ಕೇಳಲೇತಕ್ಕೆ? ಕ್ರೀ ನಷ್ಟವಾದವಂಗೆ ಕೊಡುವ ಕೊಂಬುದನರಸಲೇತಕ್ಕೆ? ನೋಡಿದಲ್ಲಿಯೆ ಸಂದಗುಣ, ಮುಟ್ಟಿದಲ್ಲಿಯೇ ಅರ್ಪಿತವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ