ತೋಯವಿಲ್ಲದ ಕುಂಭ, ಜ್ಞಾನವಿಲ್ಲದ ಘಟ, ದೇವರಿಲ್ಲದ ಗುಡಿ
ಇವು ಹಾಳು ದೇಗುಲ ಸಮವು.
ಎಲೆ ಪರವಾದಿಗಳಿರಾ:
ಗುರುವು ಎಂಬ ನಾಮವು ಪರಶಿವನು,
ಪರಶಿವನೆ ಇಷ್ಟಲಿಂಗವು.
ಆ ಇಷ್ಟಲಿಂಗದ ಪೂಜೆಯಲ್ಲಿ ಲೋಲುಪ್ತನಾಗಿರಬೇಕು,
ಆ ಗುರುಮಂತ್ರದಲ್ಲಿ ಮಗ್ನನಾಗಿರಬೇಕು,
ಚರಭಕ್ತಿಯಲ್ಲಿ ಯುಕ್ತನಾಗಿರಬೇಕು.
ಈ ತ್ರಿವಿಧವ ಬಿಟ್ಟು, ಮಲತ್ರಯಕ್ಕೆ ಒಳಗಾಗಿ
ಬಂಧನಕ್ಕೆ ಹೋಗುವರ ನೋಡಿ ಮನ ನಾಚಿತ್ತೆಂದ ನಮ್ಮ ಅಂಬಿಗರ ಚೌಡಯ್ಯ
ನಿಜಶರಣನು.