ಶ ಪದದಿಂದ ಪ್ರಾರಂಭವಾಗುವ ವಚನಗಳು:
ಶೂಲದಲ್ಲಿ ಏರಿಸಿದ ಹೆಣ, ಆಲುತ್ತ ಮಾತನಾಡುತ್ತದೆ.ಹೆಣ ಹೆಣಂ ತಾಗೆ ಶೂಲವನೊಡಗೂಡಿತ್ತು.ಶೂಲ ಕೊಲ್ಲದೆ ಆರೈವುತ್ತದೆ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು,ಅಂಗವ ತಾಳಿದ ಕಾರಣ.
ಶುಕ್ತಿ ಅಪ್ಪುವಿಲ್ಲದಿರ್ದಡೆ ಕಟ್ಟೆಯಲ್ಲದೆ ಕಟ್ಟಾಣಿಯಲ್ಲ,ಯುಕ್ತಿವಿದಂಗೆ ಸುಪಥ ದೊರಕಿದಡೆ ವಿರಕ್ತನಾಗಬೇಕು.ಮಾತಿನ ಘಾತಕದಲ್ಲಿ ನಿಹಿತದ ಆಚಾರವ ನುಡಿದಡೆ,ಏತದ ಕುಂಭದಲ್ಲಿ ಜಲವ ತುಂಬಿ ಅನಾಥವೃಕ್ಷಕ್ಕೆ ಎರೆದಂತೆ.ಅರಿವುಹೀನನ ಮಾತು ನೆರೆ ಕೊರತೆಯೆಂದೆ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ
ಶಕ್ತಿಯಂಗದ ಯೋನಿಯಲ್ಲಿ ಶುಕ್ಲ ಸೋರಿ,ಬೆಚ್ಚು ಪುತ್ತಳಿಯಾದ ಠಾವಾವುದು ?ಕೂಡಿದನಪ್ಪ, ಕೂಡಿಸಿಕೊಂಡಳವ್ವೆ.ಉಭಯದ ಯೋಗದಿಂದಾದ ಮತ್ತೆ ಬ್ರಹ್ಮನ ಅಗಡವೇಕೆ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?