ಭೂಮಿಯಿಲ್ಲದ ಧರೆಯಲ್ಲಿ, ಒಂದು ಮಹಾಮೇರುವೆಯ ಬೆಟ್ಟ ಹುಟ್ಟಿತ್ತು.
ಅದರ ತಳ ಒಂದಂಡ, ಮೇಲೆ ಮೂರಂಡ
ಮೂರರ ಮೇಲೆ ಹಾರಿಬಂದಿತ್ತು ಕಾಗೆ.
ಬಂದ ಕಾಗೆ ತುದಿಯಲ್ಲಿ ಅಂತರಿಸಲಾಗಿ, ಮೇರುವೆ ಕುಸಿಯಿತ್ತು.
ಕೆಳಗಣ ಅಂಡ ನಿಂದು, ಮೇಲಣ ಮೇರುವೆ ಒಡೆಯಿತ್ತು.
ಮೂರಂಡವನೊಡಗೂಡಿದ ಕಾಗೆ ಹಾರಿತ್ತು ,
ಬೆಟ್ಟ ಬಟ್ಟಬಯಲು ಬೊಮ್ಮನೊಡೆಯ
ತನುಮನ ಸಂಗಮೇಶ್ವರಲ್ಲಿ ಒಡಗೂಡಿದವಂಗೆ.