ಜ ಪದದಿಂದ ಪ್ರಾರಂಭವಾಗುವ ವಚನಗಳು:
ಜೀವವಳಿದು ಪರಮನಾಗಬೇಕೆಂಬರು:ಜೀವವೆಲ್ಲಿ ಅಳಿವುದು ? ಪರಮನೆಲ್ಲಿ ಅಹುದು ?ಅಳಿವುದು ಬೇರೊಂದು.ಈ ಉಭಯದ ಅಳಿವ ಉಳಿವ ಮನೆಯ ಹೇಳಾ,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
ಜಂಬೂದ್ವೀಪದಲ್ಲಿ ಹುಟ್ಟಿದವೈದು ಒಂಟೆ.ಒಂಟೆಯ ಕೊರಳೊಳಗೆ ಘಂಟೆಗೆ ನಾದವಿಲ್ಲ,ಆ ಘಂಟೆಯ ಒಳಗಣ ನಾಲಗೆ ನಾಶವಾದ ಕಾರಣ.ಆ ಒಂಟೆಯ, ಘಂಟೆಯ, ಆ ಜಂಬೂದ್ವೀಪವಒಂದು ಗಿಳಿಯ ಕಂಟಕ ನುಂಗಿತ್ತು,ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.