ನಾನಾಕೋಶವಾಸ ಕಳಾಧರ ಸಮಖಂಡನ ದಿಗ್ವಳಯ ರಣಭೂಮಿಯಲ್ಲಿ
ಒಂದು ಅರಿದ ತಲೆ ಬಂದಿತ್ತು.
ಪಂಚಾಶತ್ಕೋಟಿ ವಿಸ್ತೀರ್ಣದವರಿಗೆ ಮುಂಡವಿಲ್ಲದೆ ಬಂದೆನೆಂದು ಹೇಳುತ್ತಿದೆ.
ಮುಂಡ ತಲೆಯೊಳಡಗಿ, ತಲೆ ಮುಂಡವೆರಡೂ ಒಂದೆಲೆಯೊಳಗಡಗಿತ್ತು.
ಆ ಎಲೆಗೆ ತೊಟ್ಟು, ಮೊನೆ ನಾರಿಲ್ಲಾ ಎಂದು,
ನಾ ಬಂದೆ ಹೊಂದಿದೆನೆಂದು ನಸುನಗುತ್ತಿದ್ದಿತ್ತು ತಲೆ !
ತಲೆಹದಲ್ಲಿ ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗದಲ್ಲಿ ಕುರುಹಿಲ್ಲದ ಶರಣಂಗೆ.