ಕಾರುಕನ ಹೃದಯದ ಕಪಟ, ಕಣಿಲೆಂದು ಕೈಯ ಕಲ್ಲು,
ತನು ಕಟ್ಟಳೆಹೀನನ ಹೊಗುತೆ, ಸೈರಣೆಯವಳೊಳುಪಿನ ಮಾತು,
ಇವು ಸಾರದ ಪ್ರಸ್ಥದಂತೆ,
ವೇಷಡಂಬಕನ ಚಾತುರಿಯದ ಗೀತ[ದಂತೆ].
ಇಂತೀ ಘಾತುಕತನದ ವೇಷವ ಬಿಟ್ಟು, ನುಡಿ ನಡೆ ಸಿದ್ಧಾಂತವಾಗಬೇಕು.
ಸಗರದ ಬೊಮ್ಮನೊಡೆಯ ಇವರಿಗೆ ಸದರವೆ ಹರಿ,
ಕುಟಿಲ ಬಿಟ್ಟು ಅರಿ, ತನುಮನ ಸಂಗಮೇಶ್ವರಲಿಂಗವ.