ದ್ವೈತಾದ್ವೈತದ ಬಳಿವಿಡಿದರಸುವನಲ್ಲ.
ಅರಿವ ಮುಂದಿಟ್ಟುಕೊಂಡು, ಜ್ಞಾನದ ಮಾತ ಜಿನುಗಿ,
ಕುರುಹ ತೋರಿ, ತಿರುಗುವ ಉಪಾಧಿಕನಲ್ಲ.
ತ್ರಿಪುಟಿಸಂಕಲ್ಪ ಮೀರಿ ``ದಾಸೋಹಂ ಸ್ಯೋಹಂ ಹಂಸಃ
ಎಂಬ ಬಳಲಿಕೆಯಳಿದು,
ತಾ ಬೈಚಿಟ್ಟ ಬಯ್ಕೆಯ ತಾನೆ ಕಂಡಂತೆ .
ತಾನೇ ತನ್ನ ನಿಜ ನಿಧಾನಗಂಡ ನಿಜಸುಖಿ,
ಸ್ವಾನುಭಾವಭರಿತ ಸ್ವತಂತ್ರ ನಿತ್ಯಮುಕ್ತ,
ಸೌರಾಷ್ಟ್ರ ಸೋಮೇಶ್ವರಲಿಂಗ ತಾನಾದ ಶರಣ.