ಜೇನುತುಪ್ಪದೊಳು ಬಿದ್ದ ನೊಣವಿನಂತೆ,
ಕಾನನದೊಳು ಕಣ್ಣಕಟ್ಟಿ ಬಿಟ್ಟ ಮರುಳನಂತೆ,
ಎಲುವ ಕಡಿವ ಶ್ವಾನನಂತೆ, ಮಲವ ಭುಂಜಿಸುವ ಸೂಕರನಂತೆ,
ಮಾನಿನಿಯರಿಗೆ ಮೆಚ್ಚಿ ಕೆಡದಿರು ಮನವೆ; ಅಬ್ಥಿಮಾನಹಾನಿ.
ಲಿಂಗ ಅಬ್ಥಿಮಾನಿಯಾಗಿರು ಕಂಡ್ಯಾ ಮನವೆ
ನಿತ್ಯ ಮುಕ್ತಿ ಬೇಕಾದಡೆ.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.