ಇದ್ದೂರಲ್ಲಿ ಗುರುವಿದ್ದು ದರುಶನ ಪರುಷನವಿಲ್ಲದೆ
ದೂರದಲೆ ನೆನದುಕೊಂಡಿದ್ದೇನೆಂಬವಿಚಾರಿ
ಹಾದರಗಿತ್ತಿಯಂತೆ ಹೊಲೆಯರು ನೀವು ಕೇಳಿರೊ.
ಬೇರೂರಿಗೆ ಹೋಗಿ ಸತಿಯರ ನೆನೆದರೆ
ಇರವೆ ಮಾಡಿದ ಹಾಂಗೆ ಆಗುವುದೆ ? ಇಲ್ಲ.
ಅದೇನು ಕಾರಣವೆಂದರೆ,
ಗುರುಲಿಂಗಜಂಗಮದ ಪಾದಸೇವೆಯ ನೆರೆನಂಬಿ
ಹೆರೆಹಿಂಗದೆ ಮಾಡುವುದೆ ಮಾಟಕೂಟ ಭಕ್ತಿಮುಕ್ತಿ.
ಇಂತಲ್ಲದೆ ಉಳಿದಾದ ಮಾಟಕೂಟವೆಲ್ಲ ಬಗುಳಾಟ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.