ಅಥವಾ
(6) (4) (1) (0) (1) (0) (0) (0) (8) (1) (0) (0) (1) (0) ಅಂ (1) ಅಃ (1) (10) (0) (0) (0) (0) (0) (0) (0) (0) (0) (0) (0) (0) (0) (0) (2) (0) (1) (0) (6) (2) (0) (2) (3) (7) (0) (0) (0) (2) (1) (5) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕನ್ನವನ್ನಿಕ್ಕಿ ಚಿನ್ನವ ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಹಾದರವಮಾಡಿ ಹಾಗವ ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಗಾಣವ ಹಾಕಿ ಮೀನ ಹಿಡಿದು ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಇಂತಿವರೆಲ್ಲರು ಶಿವಯುಕ್ತವಾದ ಅನಾಚಾರ ಹಿಡಿದು ಬಿಡದೆ ಸದಾಚಾರಕ್ಕೊಳಗಾಗಿ ಮುಕ್ತಿವಡೆದರು. ಮೋಕ್ಷಾಪೇಕ್ಷಿತರಾಗಿ ಪಂಚಾಚಾರಕ್ಕೊಪ್ಪುವ ವ್ರತನೇಮಗಳ ಹಿಡಿದು ಬಿಟ್ಟವಂಗೆ ಮುಂದು ಹಿಂದಾಯಿತು, ಆತ ವ್ರತಗೇಡಿ. ಅದು ಹೇಗೆಂದೊಡೆ ಹಿಡಿದ ನೈಷ್ಠೆಯ ಬಿಟ್ಟಲ್ಲಿಯೇ ಕರ್ಮತ್ರಯಂಗಳು ಬೆನ್ನ ಬಿಡವೆಂದು ಶರಣರ ವಚನಂಗಳು ಸಾರುತ್ತಿವೆ. || ಗ್ರಂಥ || `ಸ್ಥಾವರಂ ಬ್ಥಿನ್ನದೋಷೇಣ ವ್ರತಭ್ರಷ್ಟೇನ ಜಂಗಮಂ| ಉಭಯೋಬ್ರ್ಥಿನ್ನಭಾವೇನ ನಾರ್ಚನಂ ನ ಚ ವಂದನಂ||' ಇಂತೆಂದುದಾಗಿ ಹಿಡಿದು ಬಿಡುವಲ್ಲಿ ಕಮ್ಮಾರನ ಕೈಯ್ಯ ಇಕ್ಕುಳವೇ ಶರಣ? ಹಿಡಿದು ಬಿಡುವಲ್ಲಿ ಚಂದ್ರಸೂರ್ಯರುಗಳ ಗ್ರಹಣವೇ ಶರಣ? ಹಿಡಿದು ಬಿಡುವಲ್ಲಿ ಸಲ್ಲದ ನಾಣ್ಯವೇ ಶರಣ? ಹಿಡಿದು ಬಿಡುವಲ್ಲಿ ಬಾಲಗ್ರಹವೇ ಶರಣ? ಅಲ್ಲಲ್ಲ. ಉರಿ ಕರ್ಪೂರವ ಹಿಡಿದಂತೆ ಹಿಡಿದ ವ್ರತನೇಮಂಗಳ ಬಿಡದಿಪ್ಪುದೀಗ ಶರಣಸ್ಥಲದ ಮತವಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕಪಿ ಕಳ್ಳ ಕುಡಿದು, ಕಡಲ ದಾಂಟುವೆನೆಂದು ಲಂಘಿಸಿ ನಡುನೀರಿನಲ್ಲಿ ಬಿದ್ದು, ಮೀನು ಮೊಸಳೆಗೆ ಆಹಾರವಾದಂತಾಯಿತಯ್ಯ ಎನ್ನ ಬಾಳು. ಆದಿಯಲ್ಲಿ ನಿನ್ನ ಗರ್ಭಾಂಬುದ್ಥಿಯಲ್ಲಿ ಜನಿಸಿ, ನಿನ್ನ ನೆನಹಿಲ್ಲದೆ, ಇಷ್ಟಲಿಂಗವನರಿಯದ ಪರಮ ಕಷ್ಟಜೀವಿಗಳ, ಪ್ರಾಣಲಿಂಗವನರಿಯದ ಪರಮಪಾತಕರ, ಭಾವಲಿಂಗವನರಿಯದ ಭವಕ್ಕೊಳಗಾದ ಹುಲುಮಾನವರ, ತಂದೆ-ತಾಯಿ ಬಂಧು-ಬಳಗವೆಂದು, ಭಾವಿಸಿದ ಬಲು ಪಾತಕವೆನ್ನನಂಡಲೆದು, ಅಮರ್ದಪ್ಪಿ ಅಗಲದ ಕಾರಣ, ನಿಂದ ಠಾವಿಂಗೆ ನೀರ್ದಳಿವರಯ್ಯ. ಕುಳಿತ ಠಾವಿಂಗೆ ಹೋಮವನಿಕ್ಕಿಸುವರಯ್ಯ. ನಾನು ಬಂದ ಬಟ್ಟೆಯೊಳಗೋರ್ವರು ಬಾರರಯ್ಯ. ಕಾಲನಾಳಿಂಗೆ ಕಾಲ್ದುಳಿಯಾದೆನಯ್ಯ. ಶುನಕ ಸೂಕರಾದಿಗಳ ಬಸಿರಲ್ಲಿ ಬರುವಂತೆ, ಮಾಡಿತಯ್ಯ ಎನ್ನ ಮಾಯೆ. ಒರ್ವರಿಗೆ ಹುಟ್ಟಿ ಮತ್ತೋರ್ವರಿಗೆ ಅಪ್ಪಾ ಎಂಬ ನಾಣ್ಣುಡಿಯ ದೃಷ್ಟವೆನಗಾಯಿತಯ್ಯ ಗುರುವೆ. ಈ ದೋಷಮಂ ಕರುಣದಿಂ ಕಳೆದು ಶುದ್ಧನಂ ಮಾಡಿ. ನಿನ್ನನೇ ಜನನೀ ಜನಕರೆಂಬ, ನಿನ್ನ ಭಕ್ತರು ಬಂಧು ಬಳಗವೆಂಬ ಸುಜ್ಞಾನಮಂ ಕೊಟ್ಟು, ಜಾಗ್ರತ್ಸ ್ವಪ್ನ ಸುಷುಪ್ತಿಯಲ್ಲಿ ನಿನ್ನತ್ತಲೆನ್ನ ಮುಖವ ಮಾಡಿ, ಅಕ್ಕರಿಂದ ರಕ್ಷಿಪುದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕುನ್ನಿಗೆ ರನ್ನದ ಹಲ್ಲಣವ ಹಾಕಿದಂತೆ, ಹಂದಿಯ ತಂದು ಅಂದಣವನೇರಿಸಿದಂತೆ, ಎನಗೊಲಿದು ಶಿವಲಾಂಛನವ ಕೊಟ್ಟ ಕಾರಣವೇನಯ್ಯ ಗುರುವೆ?. ನಾನು ಲಿಂಗದ್ರೋಹವ ಮಾಡಿ ಜಂಗಮವ ಕೆಡನುಡಿದೆನು. ಕೈವಿಡಿದ ಸ್ತ್ರೀಯ ಕಡಿಖಂಡವಮಾಡಿದೆ. ಒಡನಾಡಿದವರ ಕಡುಕೋಪದಿನಿರಿದುಕೊಂದೆ. ನಂಬಿದ ಹಳೆಯರ ಪ್ರಾಣಕ್ಕೆ ಮುನಿದೆ. ಪಶುವಿನ ಶಿಶುವ ತಲೆಯೊಡೆಯಿಕ್ಕಿದೆ. ಗೋವ ಕೊಂದವರ ವಹಿಸಿಕೊಂಡೆ. ಪರಧನವ ಕದ್ದೆ, ಪರಸ್ತ್ರೀಯರಿಗಳುಪಿದೆ. ಭವಿಹೆಣ್ಣುಗಳ ಕೂಡುಂಡ ಬಾಯಹುಳುಕನಯ್ಯ ನಾನು. ಇಂತಪ್ಪ ಮಹಾಪಾತಕಂಗಳ ಮಾಡಿದ್ದ ಹೊಲೆಯನಿವನೆಂದು ನೀನರಿದ ಬಳಿಕ, ಎನಗೆ ವಿರಕ್ತಿಯೆಂಬ ಲಾಂಛನ ಕೊಟ್ಟುದು, ಕೋಪದ ಕಾರಣವಲ್ಲದೆ ಕೃಪೆಯಲ್ಲವಯ್ಯ. ಅದೇನು ಕಾರಣವೆಂದೊಡೆ- ಬಟ್ಟೆಯ ಬಡಿದ ಕಳ್ಳಬಂಟನ ಭೂಪಾಲರು ಬೇಹನಿಕ್ಕಿ ಹಿಡಿತರಿಸಿ, ನಾಳೆ ಶೂಲಕ್ಕೆ ತೆಗಸುವರೆ, ಇಂದು ಕಳ್ಳಬಂಟಂಗೆ, ಪುನುಗು ಜವಾಜಿಯ ಲೇಪಿಸಿ, ಹೂವಿನ ದಂಡೆಯ ಕೊರಳು- ಮಂಡೆ-ಉರದೊಳಗೆ ಅಡ್ಡಹಾಕಿ, ಹಾಲು ತುಪ್ಪ ಹಣ್ಣುಗಳ ಉಣಕೊಟ್ಟು, ಅಡಿಗಡಿಗೆ, ಅಡಕೆಲೆಯ, ಮೆಲುಕೊಟ್ಟು ವೀರವೃಂದದ ಹಲಗೆ ಕಹಳೆಯಂ, ಅವನ ಮುಂದೆ ಸಂಭ್ರಮಿಸುವ ಬರಿಯುಪಚಾರದಂತೆ, ನಾನು ಮಾಡಿದ ಸರ್ವ ದ್ರೋಹಕ್ಕೆ ನಿನ್ನ ಮನನೊಂದು, ಎನ್ನ ಎಕ್ಕಲನರಕಕ್ಕೆ ನೂಂಕುವುದಕ್ಕೋಸ್ಕರ ಕೊಟ್ಟ ಸಟೆಯುಪಚಾರಕ್ಕಾದ ಲಾಂಛನವಲ್ಲದೆ, ದಿಟದೊಲವಲ್ಲವಯ್ಯ ದೇವನೆ. ನಾನು ಮುಂದನರಿಯದಂಧಕನಯ್ಯ. ನಿನ್ನ ಬಾಗಿಲ ಕಾವ ಗೊಲ್ಲನಯ್ಯ. ನಿನ್ನ ಕುದುರೆಯ ಸಾಕುವ ಗೋವನಯ್ಯ. ನಿನ್ನ ಚಮ್ಮಾವುಗೆಯ ಹೊತ್ತು ಬರುವ ಬೋವರ ಲೆಂಕನಯ್ಯ. ನಿನ್ನ ಪಡುಗವ ಹಿಡಿವ ಪಡುಡಿಂಡಿಯಯ್ಯ. ನೀನುಗುಳ್ದ ತಂಬುಲವನುಂಬ ನಿನ್ನಾದಿಯ ಹಳೆಯನಯ್ಯ. ನಿನ್ನಂಗಳದಲ್ಲಿ ಬೊಗಳುವ ಶ್ವಾನನಯ್ಯ. ಎನ್ನ ತಪ್ಪ ಕಾಯಯ್ಯ ಶಿವಧೋ ಶಿವಧೋ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕೆಳದಿಯರೊಡನಾಡಿ ಕಾಮಕಲಾಪ್ರೌಡ್ಥಿಯನರಿದು ಪ್ರಾಣಕಾಂತನ ಒಲಿಸಿ ಸುರತಸಂಯೋಗದೊಳಿಪ್ಪ ಕಾಮಿನಿಗೆ ಮತ್ತೆ ಕೆಳದಿಯರ ಕೂಡಣ ವಿನೋದಕ್ಕೆ ಮನವೆಳಸುವುದೇ ಅಯ್ಯ? ಶರಣ ಸಂಭಾಷಣೆಯಿಂದ ಪುರಾತನವಚನದ ಪರಮಾಮೃತವ ದಣಿಯಲುಂಡು ಆ ವಚನದ ಹೆಜ್ಜೆವಿಡಿದು ಹೋಗಿ ತ್ರಿವಿಧಲಿಂಗದ ಆದ್ಯಂತಮಂ ಅರಿದು ಆ ಲಿಂಗಂಗಳಂ ಅರಿವಿಡಿದಾಚರಿಸಿ ಷಡಂಗ ಷsಡ್ವಿಧಲಿಂಗಂಗಳಿಗೆ ಮಾತೃಸ್ಥಾನವಾದ ನಿಷ್ಕಳಬ್ರಹ್ಮವೆನಿಪಾ ಸಿದ್ಧಲಿಂಗ ಪ್ರಭುವಂ ಕಂಡು ಆ ಸಿದ್ಧಲಿಂಗ ಪ್ರಭುವಂ ಹೃದಯ ತ್ರಿಪುಟಿ ಸುಷುಮ್ನೆಯೆಂಬ ಮೂರು ಸಿಂಹಾಸನದ ಮೇಲೆ ಗುರು ಲಿಂಗ ಜಂಗಮವೆನಿಸಿ ಮೂರ್ತಿಗೊಳಿಸಿಕೊಂಡು ತುಂಬಿ ತುಳುಕದ ಮಂದಮಾರುತ ಮೈ ಸೋಂಕದ ಭಾನುವಿನಕಿರಣಕ್ಕೆ ಬಳಲದ ಚಂದ್ರೋದಯಕ್ಕೆ ಅಂದವಾಗದ ಜನರ ಕಣ್ಮನಕ್ಕೆ ಅಗೋಚರವಾದ ಜಾಜಿ ಸಂಪಿಗೆ ಇರವಂತಿಗೆ ಮಲ್ಲಿಗೆ ಕೆಂದಾವರೆ ಸೇವಂತಿಗೆ ಎಂಬ ಭಾವ ಪುಷ್ಪಂಗಳಲ್ಲಿ ಪೂಜೆಯಂ ಮಾಡಿ ಬೀಗಿ ಬೆಳವುತ್ತಿಪ್ಪ ಶರಣಂಗೆ ಮತ್ತೆ ಅನುಭಾವದ ಸುಖ ಸವಿದೋರುವುದೇ ಅಯ್ಯ? ಕೆನೆ ಸಾಧ್ಯವಾದ ಬಳಿಕ ಹಾಲಿನ ಹಂಗೇತಕಯ್ಯಾ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕೇಳು ಕೇಳಯ್ಯ ಆತ್ಮನೇ, ಎರಡು ಪ್ರಕಾರದ ಆದಿಮಧ್ಯ ಅವಸಾನವ ತಿಳಿದು ನೋಡು, ಕೆಡಬೇಡ ಕೆಡಬೇಡ. ತಂದೆಯ ದೆಸೆಯಿಂದ ತಾಯಿ ಯೋನಿಚಕ್ರದಲ್ಲಿ ಬಂದುದೇ ಆದಿ. ಹೊನ್ನು ಹೆಣ್ಣು ಮಣ್ಣು ನನ್ನದೆಂದು ಹಿಡಿದು ಷಟ್ಕರ್ಮವನಾಚರಿಸಿ ಸುಖದುಃಖಂಗಳಲ್ಲಿ ಮುಳುಗಿಪ್ಪುದೇ ಮಧ್ಯ. ಆತ್ಮನ ಕೃಪೆಯಿಂದ ಅರೆದು ಸಣ್ಣಿಸಿಕೊಂಡು ಭವಕ್ಕೆ ನೂಂಕಿಸಿಕೊಳ್ಳುವುದೇ ಅವಸಾನ. ಇವನರಿದು ಇವಕ್ಕೆ ಹೇಹಮಂ ಮಾಡು. ಮತ್ತೆ ಆದಿ ಮಧ್ಯ ಅವಸಾನಮಂ ತಿಳುಹುವೆನು. ನಾನು ಮಹಾಲಿಂಗದ ಗರ್ಭಾಬ್ಧಿಯಲ್ಲಿ ಬಂದೆನೆಂಬುದೇ ಆದಿ. ಲೋಕದ ವ್ಯವಹಾರವ ಸಾಕುಮಾಡಿ ಇಷ್ಟಲಿಂಗದಲ್ಲಿ ನಿಷೆ*ಯಾಗಿ, ಪ್ರಾಣಲಿಂಗದಲ್ಲಿ ಪರಿಣಾಮಿಯಾಗಿ, ಕ್ಷುತ್ತಿಂಗೆ ಭಿಕ್ಷೆ ಶೀತಕ್ಕೆ ರಗಟೆಯಾಗಿ, ಮೋಕ್ಷಗಾಮಿಯಪ್ಪುದೇ ಮಧ್ಯ. ತನುವ ಬಿಡುವಲ್ಲಿ ಮನವ ಪರಬ್ರಹ್ಮಕ್ಕೆ ಸಮರ್ಪಣ ಮಾಡಿ, ಜನನ-ಮರಣ ಗೆಲುವುದೇ ಅವಸಾನ. ಇದನರಿದು ಇದಕ್ಕೆ ಮೆಚ್ಚಿ, ಲಿಂಗವನೆ ಸಾಧಿಸು ವೇಧಿಸು. ಕಪಿಯ ಕೈಯ ಕನ್ನಡಿಯಂತೆ ಕುಣಿದರೆ ಕುಣಿದು, ಏಡಿಸಿದರೆ ಏಡಿಸಿ, ಹಲ್ಲುಕಿರಿದರೆ ಹಲ್ಲುಕಿರಿದು, ಮನವಾಡಿದಂತೆ ನೀನಾಡಬೇಡ. ಮನವಾಡಿದಂತೆ ಆಡಿದವಂಗೆ, ಭಕ್ತಿಯೆಲ್ಲಿಯದು? ಜ್ಞಾನವೆಲ್ಲಿಯದು? ವೈರಾಗ್ಯವೆಲ್ಲಿಯದು? ವಿರಕ್ತಿಯೆಲ್ಲಿಯದು? ಮುಕ್ತಿಯೆಲ್ಲಿಯದಯ್ಯಾ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕೋಗಿಲೆ ಸ್ವರಗೈದಿತೆಂದು ಕಾಗೆ ಅದಕ್ಕೆ ಇದಿರಾಗಿ ಕುಳಿತು ಕರ್ರೆಂದು ಕಟಕಿಯನಾಡಿದರೆ ಆ ಕೋಗಿಲೆಗಾದ ಕೊರತೆಯೇನಯ್ಯ? ಸೂರ್ಯ ಪ್ರಕಾಶವನುಳ್ಳವನಲ್ಲಿ ಕತ್ತಲೆ ಮೈಯವನೆಂದು ಹಗಲು ಕಣ್ಣು ಕಾಣದ ಗೂಗೆ ಕೆಟ್ಟು ನುಡಿದರೆ ಸೂರ್ಯನಿಗಾದ ಕೊರತೆಯೇನಯ್ಯ? ಕನ್ನಡಿಗೆ ಮೂಗಿಲ್ಲವೆಂದು ಮೂಕೊರೆಯೆ ಹಳಿದರೆ ಆ ಕನ್ನಡಿಗಾದ ಕೊರತೆಯೇನಯ್ಯ? ದ್ವೈತ ಅದ್ವೈತವ ನೂಂಕಿ ಅಂಗ ಲಿಂಗದ ಹೊಲಬನರಿದು ಸ್ವಯಂಲಿಂಗಿಯಾದ ಶರಣನ ಅಂಗವಿಕಾರದ ಪಂಗುಳ ಮಾನವರು ಜರಿದು ರುsುಂಕಿಸಿ ನುಡಿದರೆ ಆ ಲಿಂಗಾನುಭಾವಿಗಾದ ಕೊರತೆಯೇನಯ್ಯಾ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕಾಮಧೇನುವಿನಲ್ಲಿ ಕಲ್ಪಿಸಿದ ಸವಿಯಿಪ್ಪುದಲ್ಲದೆ ಮತ್ರ್ಯದ ಪಶುವಿನಲ್ಲಿ ಉಂಟೇನಯ್ಯ? ಮಹಾಶೇಷನಲ್ಲಿ ಮಾಣಿಕ್ಯ ಪ್ರಭಾವಿಸುತಿಪ್ಪುದಲ್ಲದೆ ಕೆರೆಯೊಳಗಣ ಒಳ್ಳೆಯೊಳಗುಂಟೇನಯ್ಯ? ವಾರಣದ ಕುಂಭಸ್ಥಲದಲ್ಲಿ ಮೌಕ್ತಿಕ ಬೆಳಗುತಿಪ್ಪುದಲ್ಲದೆ ಊರ ಹಂದಿಯಲ್ಲಿ ಉಂಟೇನಯ್ಯ? ಶರಣರ ಮನೋಮಧ್ಯದಲ್ಲಿ ಆ ಶಿವನು ಮೂರ್ತಿಗೊಂಡು ಆ ಶರಣರ ಜಿಹ್ವೆಯ ಕೊನೆಯ ಮೇಲೆ ವಚನವೆಂಬ ಪರಮಾಮೃತವ ಕರೆದು ಕೆಲಬಲದ ಗಣಂಗಳಿಗೆ ಸವಿದೋರಿ ಆ ಶರಣರಲ್ಲಿ ಪರಿಪೂರ್ಣನಾಗಿಪ್ಪನಲ್ಲದೆ ದ್ವೆ ೈತ ಅದ್ವೆ ೈತಗಳೆಂಬ ಮನೆ ಶುನಕ ಸೂಕರರಲ್ಲಿ ಉಂಟೇನಯ್ಯ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕತ್ತಲೆ ಸತ್ತು ಬೆಳಗು ಬೀದಿವರಿಯಿತ್ತು ನೋಡಾ ಎಲೆ ಅಮ್ಮಾ. ಪಂಚತತ್ವಂಗಳ ಮೇಲಿಪ್ಪ ಆಚಾರಲಿಂಗದ ನಿಷೆ*ಯ ಬಲದಿಂದ ಆ ಖಂಡಿತ ಕರಣಂಗಳನೊಳಕೊಂಡಿಪ್ಪ ಈಷಣತ್ರಯಂಗಳ ಬೀಯವನಿಕ್ಕಿ ತ್ಯಾಗಾಂಗಿಯಾದೆ. ಹದಿನೇಳುತತ್ವಂಗಳ ಮೇಲಿಪ್ಪ ಜಂಗಮಲಿಂಗದ ಎಚ್ಚರಿನ ಬಲದಿಂದ ಅನಂತಸವಿಯನೊಳಕೊಂಡಿಪ್ಪ ಷsಡುರಸಾನ್ನಂಗಳಲಿ ಲಿಂಗಭೋಗೋಪಭೋಗಿಯಾಗಿ ಭೋಗಾಂಗಿಯಾದೆ. ಮೂರುತತ್ವಂಗಳ ಮೇಲಿಪ್ಪ ನಿರಾಕಾರಲಿಂಗದ ಅರುಹಿನ ಬಲದಿಂದ ಪ್ರಣವ ಪಂಚಾಕ್ಷರಿಯ ಸ್ಮರಿಸಿ ಮನ ಮಹಾಲಿಂಗದಲ್ಲಿ ಯೋಗವಾಗಿ ಯೋಗಾಂಗಿಯಾಗಿ ಚಿದ್ಪ್ರಹ್ಮಾಂಡದೊಳಗಣ ಏಳುತಾವರೆಯ ಮೇಲಿಪ್ಪ ನಿಷ್ಕಲ ಚಿದ್ವಿಂದುಲಿಂಗಕ್ಕೆ ಪ್ರಾಣಪೂಜೆಯಂ ಮಾಡೆ ಮಹಾಜ್ಞಾನಬಲದಿಂದ ನವದ್ವೀಪಗಳ ಲಿಂಗಂಗಳ ಬೆಳಗು ಪಿಂಡಾಂಡದಲ್ಲಿ ಪ್ರಭಾವಿಸಿ ತೋರುತಿರ್ಪುದಾಗಿ ನಾನು ಸರ್ವಾಂಗಲಿಂಗಿಯಾದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕುಂದಣಕ್ಕೆ ಒಪ್ಪುವ ಒರೆ ಬಣ್ಣದ ಮಿಶ್ರವಂ ಚಿನ್ನವರದ ಬಲ್ಲನಲ್ಲದೆ ಗೇಯ್ದುಂಬ ಒಕ್ಕಲಮಗನೆಂತು ಬಲ್ಲನಯ್ಯ? ವಸ್ತುವನೊಡಗೂಡುವ ಸಂಧಾನದ ನುಡಿಯಗಡಣದ ಲಿಂಗ ಬೆಳಗ ಲಿಂಗಸಂಧಾನಿ ಬಲ್ಲನಲ್ಲದೆ ಅರಿವು ಮರವೆಯನೊಳಕೊಂಡಿಪ್ಪ ವೇಷಧಾರಿಗಳವರೆಂತು ಬಲ್ಲರಯ್ಯಾ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಕತ್ತಲೆ ಭೂತಳದ ವರ್ತಮಾನಕ್ಕೆ ಹೇಸಿ ಮನ ಓತು ಸುಚಿತ್ತ ನಿರ್ವಾಣದಾಸೋಹಮಂ ಕೈವಿಡಿದೆನಮ್ಮಾ. ಎನ್ನ ತನುವೇ ವನಿತೆ ಕರಣಂಗಳೇ ದ್ರವ್ಯ ಉರವಣಿಸಿದ ಭಕ್ತಿ ಇಂತೀ ತ್ರಿವಿದ ಪದಾರ್ಥಗಳಂ ಹಿಡಿದು ಗಣಂಗಳ ಮುಂದೆ ಕರಪಾತ್ರೆಯೆಂಬ ಕಾಯಕಮಂ ಕಟ್ಟಿದೆ. ಎನ್ನ ಸಮಯಾಚಾರಕ್ಕೆ ಸ್ಮಶಾನ ಮಂಟಪದಲ್ಲಿ ಗುರುವ ತಡೆದೆ. ಹೃದಯಮಂಟಪದಲ್ಲಿಹ ಜಂಗಮವ ತಡೆದೆ. ಎನ್ನ ಸ್ವಯ ಕಾಯಕಮಂ ತಂದು ರೂಪು ಪದಾರ್ಥಗಳಂ ನಿರ್ಭಾವ ಪರಿಯಾಣದಲ್ಲಿ ಗಡಣಿಸಿ ಗುರುವಿನ ಮುಂದಿಕ್ಕಿದೆ. ರುಚಿ ಪದಾರ್ಥಂಗಳಂ ಸುಮನ ಪರಿಯಾಣದಲ್ಲಿ ಗಡಣಿಸಿ ಜಂಗಮದ ಮುಂದಿಕ್ಕಿದೆ. ತೃಪ್ತಿ ಪದಾರ್ಥಂಗಳಂ ಭಾವದ ಪರಿಯಾಣದಲ್ಲಿ ಗಡಣಿಸಿ ಲಿಂಗದ ಮುಂದಿಕ್ಕಿದೆ. ಇಂತೀ ನಿರಂಜನ ಗುರು ಲಿಂಗ ಜಂಗಮ ಸವಿದು ಒಕ್ಕು ಮಿಕ್ಕ ತ್ರಿವಿಧಪ್ರಸಾದವನುಂಡು ತ್ರಿವಿಧಕರ್ಮ ನಾಸ್ತಿಯಾಗಿ ನಾನು ಬದುಕಿದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ