ನಾ ಬಂದೆ ಹರಿಭಕ್ತನಾಗಿ,
ಬಾಹಾಗ ನಾ ದಾಸನಾಗಿ.
ಒಂಬತ್ತು ಜೂಳಿಯ ತಣ್ಣೀರ ಕಣಿತೆಯ ಹೊತ್ತು
ತಿತ್ತಿಗ ನೀರ ಕಾಣೆ.
ಲೆಕ್ಕವಿಲ್ಲದ ನಾಮವನಿಕ್ಕಿದೆ,
ಸುತ್ತಿ ಸುತ್ತಿ ಬಳಸಿದೆ.
ಹೀಲಿಯ ಗರಿಯ ಹೇಕಣ್ಣ,
ಪಜ್ಞೆಯ ನಾಮವ ದೃಷ್ಟಿಯ ಮಧ್ಯದಲ್ಲಿ ಇಕ್ಕಿ
ಮತ್ತೆ ಅದರ ನಡುವೆ ನಿಶ್ಚಯ ಬಿಳಿಯ ನಾಮವನಿಕ್ಕಿ
ಹೊತ್ತ ದಾಸಿಕೆ ಹುಸಿಯಾಯಿತ್ತು.
ದಾಸೋಹವೆಂಬುದನರಿಯದೆ ಎನ್ನ ವೇಷ ಹುಸಿಯಾಯಿತ್ತು,
ನಾರಾಯಣಪ್ರಿಯ ರಾಮನಾಥಾ.