ಅಥವಾ
(4) (1) (1) (0) (0) (1) (0) (0) (1) (0) (0) (0) (0) (0) ಅಂ (1) ಅಃ (1) (4) (0) (4) (0) (0) (0) (0) (3) (0) (0) (0) (0) (0) (0) (0) (0) (0) (0) (0) (1) (3) (0) (0) (0) (2) (0) (0) (0) (0) (0) (1) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೃಥ್ವಿ ಸಕಲವ ಧರಿಸಿಕೊಂಡಿಪ್ಪಂತೆ ಶಿವಶರಣ ಸಮಾಧಾನಿಯಾಗಿರಬೇಕಯ್ಯಾ. ಅಪ್ಪುವಿನ ನಿರ್ಮಳದಂತೆ ಶಿವಶರಣ ನಿರ್ಮಳನಾಗಿರಬೇಕಯ್ಯಾ. ಪಾವಕನು ಸಕಲದ್ರವ್ಯಂಗಳ ದಹಿಸಿಯು ಲೇಪವಿಲ್ಲದ ಹಾಂಗೆ ಶಿವಶರಣ ನಿರ್ಲೇಪನಾಗಿರಬೇಕಯ್ಯಾ. ವಾಯು ಸಕಲದ್ರವ್ಯಂಗಳಲ್ಲಿಯು ಸ್ಪರ್ಶನವ ಮಾಡಿಯು ಆ ಸಕಲದ ಗುಣವ ಮುಟ್ಟದ ಹಾಂಗೆ ಶಿವಶರಣ ಸಕಲಭೋಗಂಗಳನು ಭೋಗಿಸಿಯು ಸುಗಂಧ ದುರ್ಗಂಧಂಗಳನು ಮುಟ್ಟಿಯು ನಿರ್ಲೇಪಿಯಾಗಿರಬೇಕಯ್ಯ! ಆಕಾಶವು ಸಕಲದಲ್ಲಿ ಪರಿಪೂರ್ಣವಾಗಿಹ ಹಾಂಗೆ ಶಿವಶರಣ ಸಕಲದಲ್ಲಿ ಪರಿಪೂರ್ಣನಾಗಿರಬೇಕಯ್ಯಾ. ಇಂದುವಿನಂತೆ ಶಿವಶರಣ ಸಕಲದಲ್ಲಿ ಶಾಂತನಾಗಿರಬೇಕಯ್ಯಾ. ಭಾನುವು ತಮವನಳಿಸಿ ಪ್ರಕಾಶವ ಮಾಡುವ ಹಾಂಗೆ ಶಿವಶರಣ ಅವಿದ್ಯವ ತೊಲಗಿಸಿ ಸುವಿದ್ಯವ ಮಾಡಬೇಕಯ್ಯಾ. ಇದು ಕಾರಣ, ಸದ್ಗುರುಪ್ರಿಯ ಸಿದ್ಧಸೋಮನಾಥಾ, ನಿಮ್ಮ ಶರಣ ನಿರ್ಲೇಪನಯ್ಯಾ.
--------------
ಅಮುಗಿದೇವಯ್ಯ
ಪ್ರಾಣಲಿಂಗವೆಂಬುದೊಂದು ಮಾತಿನಂತುಟಲ್ಲ. ಲೋಗರ ಸುಖದುಃಖ ತನ್ನದೆನ್ನದನ್ನಕ್ಕ ಚೆನ್ನ ಸಿದ್ಧಸೋಮನಾಥನೆಂಬ ಲಿಂಗ ಬರಿದೆ ಒಲಿವನೆ?
--------------
ಅಮುಗಿದೇವಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮರೆಂಬ ಅಷ್ಟತನುವಿಡಿದು ಜಗಕ್ಕೆ ದೃಷ್ಟನಾಗಿ ತೋರುವ ಕರ್ಮರೂಪವೆಂಬುದು ಶಿವನ ಸ್ಥೂಲತನುವೆನಿಸುವುದು. ಸಕಲಲೋಕಕ್ಕೆ ಆಧಾರಾಧೇಯವಾಗಿ, ಕಮಲಲೋಚನರೊಳಗಾದ ದೇವ ದಾನವ ಮಾನವಮನುಮುನಿಗಳಿಗೊಡೆಯನಾಗಿ, ವರದಾಭಯಕರನೆನಿಸಿ ಮೂರ್ತಿಸಹಿತ ತೋರುವ. ಪ್ರಕೃತಿವಿಡಿದು ನಿತ್ಯವೆನಿಸಿ, ಕೈಲಾಸಪತಿ ಪಶುಪತಿಯಾಗಿ, ನಂದಿನಾಥ ಭೃಂಗಿನಾಥ ಮೊದಲಾದ ಗಣನಾಥರ ಕಣ್ಗೆ ಮಂಗಳವಾಗಿ ತೋರುವ. ಸದಾಶಿವಮೂರ್ತಿಯೆಂಬುದು ಶಿವನ ಸೂಕ್ಷ್ಮತನುವೆನಿಸುವುದು. ಅತ್ಯತಿಷ*ದ್ದಶಾಂಗುಲವೆಂಬ ಶ್ರುತಿತಾರ್ಕಣೆಯಾಗಿ, ಅಕಾಯಚರಿತನಾಗಿ, ಕಾಲಕರ್ಮಕ್ಕಗೋಚರನಾಗಿ, ತೋರಿಯೂ ತೋರದೆ, ಮುಟ್ಟಿಯೂ ಮುಟ್ಟದೆ, ಆಗಿಯೂ ಆಗದೆ, ಇರ್ದೂ ಇಲ್ಲದೆ, ಬೆರಸಿಯೂ ಬೆರಸದೆ, ಆಕಾಶದಂತೆ ಭರಿತನಾಗಿ, ಅವಿನಾಶಿಯಾಗಿ, ಅಭಾವಿಯಾಗಿ, ತತ್ವಮಸಿವಾಕ್ಯಲೀನವಾಗಿ, ಜ್ಞಾತೃ ಜ್ಞಾನ ಜ್ಞೇಯವಿಹೀನವಾಗಿ ತೋರಿದನೆನ್ನ ಸ್ವಾಮಿ. ಶ್ರೀಗುರುಕಾರುಣ್ಯದಿಂದಳವಟ್ಟು, ಜ್ಞಾನಿಯ ಹೃದಯದೊಳಗೆ ದರ್ಪಣದ ಛಾಯೆಯಂತೆ ತೋರಿ ಹಿಡಿಯಲಿಲ್ಲದ ಒಳಗಣ ಬಯಲು ಮುಸುಕಿದ ಮಹಾಬಯಲಿನಂತೆ ಮುಟ್ಟಲಿಲ್ಲದ ಸ್ವಯಂವೇದ್ಯವಾದ ಘನತತ್ವದ ರೂಪೆಂಬುದು ಮಹಾಘನ ಸದ್ಗುರು ಸಿದ್ಧಸೋಮನಾಥಾ, ನಿಮ್ಮ ಕಾರಣತನುವೆನಿಸುವುದು.
--------------
ಅಮುಗಿದೇವಯ್ಯ