ಎಮ್ಮ ನಲ್ಲನ ಬಯಲ ಬಣ್ಣವ ಕಂಡು ಎನ್ನ ಮನ ಬೆರಗಾಯಿತ್ತವ್ವಾ,
ಇದು ಕಾರಣ ನೋಡದೆ ನೋಡುತಿರ್ದೆನು.
ಆತನ ನೋಡುವ ತವಕದಿಂದ ಮುಂದೆ ಬಂದೆನ್ನ ಕೂಡಿದನಾಗಿ,
ಕೂಡದೆ ಕೂಡುತಿರ್ದೆನು.
ಆತನ ಬೆರಸುವ ಭೇದದಿಂದ ಆನೆನ್ನ ಮರೆದರೆ
ಮೆಚ್ಚಿ ತಾನೆನಗೊಲಿದನಾಗಿ ಬೆರಸದೆ ಬೆರಸುತಿರ್ದೆ!
[ತಾ]ನೆನ್ನ ಹರಣ ಹಾರದಂತೆನ್ನ ತನುವನಾರಡಿಗೊಂಡನಾಗಿ
ಜ್ಞಾನಾಂಗನೆಯೆಂದೆನಿಸು.
ಇದು ಕಾರಣ, ಮಹಾಘನ ಸಿದ್ಧಸೋಮನಾಥನ
ಅಂಗಸುಖದ ಸಂಗವ ಮೆಚ್ಚಿ ನೆನೆಯದೆ ನೆನೆವುತ್ತಿದ್ದೆನು.