ಬ್ರಹ್ಮ ಮಡಕೆಯಾಗಿ, ವಿಷ್ಣು ಮಂತಾಗಿ, ಯುಗಜುಗಂಗಳು ಮೊಸರಾಗಿ, ಅಹುದಲ್ಲಯೆಂಬ ಎರಡು ಕಡೆಗುಣಿಯ ನೇಣು; ನೆಟ್ಟ ಸ್ಥಾಣು ರುದ್ರಮುರ್ತಿ, ಹಿಡಿದು ಕಡೆವ ಕಣ್ಣ ಕಂಗಳ ನೋಟ ಇದು ಅತಿ ಮಥನವಾಗಿದೆ, ಆತುರವೈರಿ ಮಾರೇಶ್ವರಾ.
ಬಲ್ಲವನಾಗಿ ಮಾತಿನ ವೈರಕ್ಕೆ ಎಲ್ಲರೊಳಗೂ ಹೋರಿ, ಕೃಪೆಯಿಲ್ಲಿದವನಾಗಿ ತತ್ಕಾಲ ಉಚಿತ ದೇಹಕ್ಕೆ ದಳ್ಳುರಿಯವನಾಗಿ, ಮಿಕ್ಕವರೆಲ್ಲರಿಗೆ ಸನ್ಮತಿಯ ಹೇಳುವ ಚಿಳ್ಳನ ನೋಡಾ, ಆತುರವೈರಿ ಮಾರೇಶ್ವರಾ