ಪರುಷವ ಸೋಂಕಿದ ಲೋಹಕ್ಕೆ ಮತ್ತೆ ಪರುಷದ ಹಂಗೇಕೆ ?
ಸರ್ಪದಷ್ಟವಾದ ದೇಹಕ್ಕೆ ಕಟುತ್ವ ಮಧುರದ ರಸಂಗಳ
ಪ್ರಮಾಣಿಸಬಲ್ಲುದೆ ?
ಇಂತೀ ದೃಷ್ಟದಂತೆ ಲಿಂಗವಿದ್ದ ತನುವಿಂಗೆ
ಅಷ್ಟೋತ್ತರಶತವ್ಯಾಧಿಗಳಲ್ಲಿ ಕಟ್ಟುವಡೆದು
ಬಂಧನಕ್ಕೊಳಗಾಗುತ್ತ, ತಾಪತ್ರಯದಲ್ಲಿ ಸತ್ತು ಹುಟ್ಟುತ್ತ,
ನಾನಾ ವಿಕಾರದಲ್ಲಿ ನಷ್ಟವಾಗುತ್ತ,
ಮತ್ತೆ ಮಾತಿನ ವಾಸಿಗೆ ಮಿಟ್ಟೆಯ ಭಂಡರಂತೆ ಕಟ್ಟಿ ಹೋರುತ್ತ,
ತಥ್ಯಮಿಥ್ಯದಲ್ಲಿ ಕುಕ್ಕುಳಗುದಿವುತ್ತ,
ಮತ್ತೆ ಭಕ್ತವಿರಕ್ತರೆಂದು ಆತ್ಮತೇಜಕ್ಕೆ ಬಿಕ್ಕನೆ ಬಿರಿವುತ್ತ,
ಇಂತೀ ಕೆಟ್ಟ ಕೇಡ ನೋಡೆ
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವು ಅಂಜಿ ನಷ್ಟವಾಗಿ ಹೋದ.