ಉತ್ಪತ್ಯವೆಂಬ ಪಶುವಿನ ಮೇಲೆ
ಸ್ಥಿತಿಯೆಂಬ ವೃಷಭ ಏರಿತ್ತಲ್ಲಾ.
ಸ್ವಸ್ಥಾನವಾಗಿ ಸುಖದ ಸುಗ್ಗಿಯಿಂದ
ಬಿಂದು ನಿಂದು ಕರು ಹುಟ್ಟಿತ್ತಲ್ಲಾ.
ಕರು ಉದಯವಾಗಿ ಕರಿಗೊಂಡಡೆ ಲಲ್ಲೆಯಿಂದ ಕ್ಷೀರ.
ಅವು ಒಲ್ಲದಿದ್ದಡೆ ಓರೆಯಾಯಿತ್ತಲ್ಲಾ.
ಇಂತೀ ಅರಿವು ಕರಿಗೊಂಡ ಭೇದ.
ಇಂತೀ ಅರಿದು ಬರುದೊರೆವೋದ ಭೇದ.
ಇಂತೀ ಜ್ಞಾನ ನೇತ್ರಸೂತ್ರ ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ
ತುರುಗಾಹಿ ರಾಮನ ಮಾತು.