ಆ ಪದದಿಂದ ಪ್ರಾರಂಭವಾಗುವ ವಚನಗಳು:
ಆತ್ಮಂಗೆ ಕಾಯವೆ ರೂಪು.ಆ ಕಾಯಕ್ಕೆ ಆತ್ಮನೆ ಹಾಹೆ.ಆ ಹಾಹೆಗೆ ಅರಿವೇ ಬೀಜ.ಆ ಬೀಜಕ್ಕೆ ಗೋಪತಿನಾಥ ವಿಶ್ವೇಶ್ವರಲಿಂಗವೆ ನಿರ್ವೀಜ.
ಆವಾವ ಭೇದಂಗಳಿಂದ ಬಂದಡೂ ಕಾವುದೊಂದೆ ಭೇದ.ಹೆಣ್ಣು ಹೊನ್ನು ಮಣ್ಣು ಕಾವಲ್ಲಿ ಸಜ್ಜನಂಗಲ್ಲದೆ ಅಶಕ್ಯ ನೋಡಾ.ಅವ ಕಾವಲ್ಲಿಯಾದಡೂ ಭಾವಶುದ್ಧವಾಗಿರಬೇಕು.ಈ ಗುಣ ಅರಿವಿನ ಕುರುಹಿನ ಹಾದಿ;ತುರುಗಾಹಿ ರಾಮನ ಪಥ.ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಸುಪಥದ ಪಥ.