ಅಥವಾ
(3) (2) (1) (0) (2) (0) (0) (0) (0) (1) (0) (0) (0) (0) ಅಂ (1) ಅಃ (1) (9) (0) (1) (0) (0) (0) (0) (2) (0) (0) (0) (0) (0) (0) (0) (10) (0) (2) (0) (3) (2) (0) (2) (1) (1) (0) (0) (0) (0) (1) (5) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆತ್ಮಂಗೆ ಕಾಯವೆ ರೂಪು. ಆ ಕಾಯಕ್ಕೆ ಆತ್ಮನೆ ಹಾಹೆ. ಆ ಹಾಹೆಗೆ ಅರಿವೇ ಬೀಜ. ಆ ಬೀಜಕ್ಕೆ ಗೋಪತಿನಾಥ ವಿಶ್ವೇಶ್ವರಲಿಂಗವೆ ನಿರ್ವೀಜ.
--------------
ತುರುಗಾಹಿ ರಾಮಣ್ಣ
ಆವಾವ ಭೇದಂಗಳಿಂದ ಬಂದಡೂ ಕಾವುದೊಂದೆ ಭೇದ. ಹೆಣ್ಣು ಹೊನ್ನು ಮಣ್ಣು ಕಾವಲ್ಲಿ ಸಜ್ಜನಂಗಲ್ಲದೆ ಅಶಕ್ಯ ನೋಡಾ. ಅವ ಕಾವಲ್ಲಿಯಾದಡೂ ಭಾವಶುದ್ಧವಾಗಿರಬೇಕು. ಈ ಗುಣ ಅರಿವಿನ ಕುರುಹಿನ ಹಾದಿ; ತುರುಗಾಹಿ ರಾಮನ ಪಥ. ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಸುಪಥದ ಪಥ.
--------------
ತುರುಗಾಹಿ ರಾಮಣ್ಣ