ವಚನಕಾರ:
ಆಯ್ದಕ್ಕಿ ಮಾರಯ್ಯ
ಅಂಕಿತ ನಾಮ:
ಅಮರೇಶ್ವರಲಿಂಗ
ಕಾಲ:
1160
ದೊರಕಿರುವ ವಚನಗಳು:
32 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ರಾಯಚೂರು ಜಿಲ್ಲೆ, ಲಿಂಗಸೂರ ತಾಲ್ಲೂಕಿನ ಅಮರೇಶ್ವರ
ಪರಿಚಯ:
ಕಾಲ ಸು. 1160. ಸ್ಥಳ: ರಾಯಚೂರು ಜಿಲ್ಲೆ, ಲಿಂಗಸೂರ ತಾಲ್ಲೂಕಿನ ಅಮರೇಶ್ವರ. ನೆಲದಲ್ಲಿ ಚೆಲ್ಲಾಡಿದ ಅಕ್ಕಿಯನ್ನು ಆಯ್ದು ಬದುಕುವುವು ಇವನ ಕಾಯಕ ‘ಕಾಯಕವೇ ಕೈಲಾಸ’ ಎಂಬ ಪ್ರಸಿದ್ಧ ನುಡಿಗಟ್ಟು ಈತನ ವಚನದಲ್ಲಿ ದೊರೆಯುತ್ತದೆ. ಕಾಯಕ ಮತ್ತು ದಾಸೋಹ ಇವನ 32 ವಚನಗಳ ಮುಖ್ಯ ವಸ್ತುಗಳು, ನೋಡಿ: ಆಯ್ದಕ್ಕಿ ಲಕ್ಕಮ್ಮ.