ಸತ್ವಹೀನವಾದ ಮತ್ತೆ ಕಾಲೆರಡು ಕೋಲೊಂದಾಯಿತ್ತು.
ಕೃತ್ಯದ ಹೊತ್ತು ಹೋದ ಮತ್ತೆ
ವ್ಯಾಕುಲದ ಚಿತ್ತವದ ಲಕ್ಷರ, ಬಹುವ್ಯಾಪಾರ ಮೊತ್ತದ ಘಟ,
ಪ್ರಕೃತಿ ಆಶ್ರಯಕ್ಕೆ ಬಂಧನ ಪ್ರಾಪ್ತಿ, ಅಡಗುವ ಕರಂಡ.
ಇದರಂದವ ತಿಳಿದು,
ಹಿಂಜಾವಕೆ ಮುನ್ನವೆ ಶಿವಲಿಂಗದರ್ಶನವಾಗಿ
ಶುದ್ಧಸಿದ್ಧಪ್ರಸಿದ್ಧ ಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲದೆ