ದುಃಸ್ವಪ್ನವ ಕಾಣದಿರಿ, ದುರ್ವಿಕಾರದಲ್ಲಿ ಕೂಡದಿರಿ,
ಮನೋವಿಕಾರದಲ್ಲಿ ಹರಿದಾಡದಿರಿ,
ಪಂಚಾಕ್ಷರಿಯ ಜಪಿಸಿ ಷಡಕ್ಷರಿಯ ಸಂಬಂಧಿಸಿಕೊಳ್ಳಿ,
ಮೂಲಮಂತ್ರವನಾತ್ಮಂಗೆ ವೇಧಿಸಿಕೊಳ್ಳಿ.
ಮರೆಯದಿರಿ ಗುರುವಾಜ್ಞೆಯ,
ತೊರೆಯದಿರಿ ಶಿವಪೂಜೆಯ,
ಅರಿದು ಮರೆಯದಿರಿ ಚರಸೇವೆಯ.
ಇಂತೀ ತ್ರಿಗುಣವ ನೆರೆ ನಂಬಿ,
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.