ಚಂದ್ರಕಾಂತದ ಶಿಲೆಯಲ್ಲಿ ಬಿಂದುವಿದ್ದಡೆ
ಹಿಂಡಿ ಹಿಳಿದಡೆ ಬಂದುದುಂಟೆ ಆ ಬಿಂದು ?
ವರುಣ ಶಿಲೆಯಲ್ಲಿ ಉರುಹಿ ನೋಡಲಿಕ್ಕೆ
ಉರಿದುದುಂಟೆ ಅನಲ ?
ಅವು ತಮ್ಮ ಒಲವರದ ಸಾಮ್ಯಕ್ಕಲ್ಲದೆ ಫಲಿಸುವುದಿಲ್ಲ.
ಇಂತೀ ತೆರದಂತೆ ಕ್ರೀ ಜ್ಞಾನ ಎಲ್ಲವ ಬಲ್ಲೆನೆಂದು
ಅಡ್ಡವಾಯ್ದು ಅಲ್ಲಲ್ಲಿ ನುಡಿದಡೆ
ನಿಜವಸ್ತು ಸಲ್ಲೀಲೆಯಲ್ಲಿಪ್ಪನೆ ?
ಶ್ರದ್ಧೆ ಸನ್ಮಾರ್ಗಿಗಳಲ್ಲಿಯಲ್ಲದೆ ಗೆಲ್ಲಗೂಳಿಗಳಲ್ಲಿಯಿಲ್ಲ.
ಸಂಗನಬಸವಣ್ಣ ಸಾಕ್ಷಿಯಾಗಿ
ಬ್ರಹ್ಮೇಶ್ವರಲಿಂಗವು ಅವರಲ್ಲಿ ಇಲ್ಲವಾಗಿ