ಎಲೆಗಳೆದ ವೃಕ್ಷಕ್ಕೆ ತಳಿರ ಕೊನರಲ್ಲದೆ
ಬೇರು ಸಾರಗೆಟ್ಟು ನಷ್ಟವಾದ ತರುವಿಂಗೆ ಮತ್ತೆ ಅಂಕುರವುಂಟೆ ?
ತ್ರಿವಿಧಮಲಕ್ಕೆ ದೂರಸ್ಥನಾಗಿ ಅಪೇಯವೆಂದು ಬಿಟ್ಟಲ್ಲಿ
ಮತ್ತರಿದು ಹಿಡಿದೆಹೆನೆಂದಡೆ ಪೇಯವಪ್ಪುದೆ ?
ತಳನನಗೆದು ಮೇಲನರಿಯದೆ ಬೀಳಿಸಿಕೊಂಬವನಂತೆ
ತನ್ನ ಊಣೆಯವ ತಾನರಿಯದೆ
ಮೂಕೊರತಿ ಮೂಕುತಿಯ ಮಣಿಯ
ತನಗೆಂದು ವಿಚಾರಿಸುವಂತೆ
ಇಂತೀ ನಿರ್ವಾಣ ಬರುದೊರೆವೋಯಿತ್ತಲ್ಲಾ ಸಂಗನಬಸವಣ್ಣಾ.
ಇವರುವನರಿಯದಂತೆ
ಬ್ರಹ್ಮೇಶ್ವರಲಿಂಗಕ್ಕೆ ಉರಿಯದೆ ಹೋದರಲ್ಲಾ.