ಉಪಾಧಿಕಂಗೆ ಆವ ವ್ರತ, ತ್ರಿವಿಧ ಭಕ್ತಿ ಏನೂ ಇಲ್ಲ.
ನಿರುಪಾಧಿಕಂಗೆ ಅವಾವ ವ್ರತ, ತ್ರಿವಿಧಭಕ್ತಿ ಉಂಟು.
ಸ್ವಯಾನುಭಾವಿಗೆ ಇದಿರ ದಯೆ ದಾಕ್ಷಿಣ್ಯ
ತನ್ನಯ ಅರಿವಿನ ವಿಲಾಸಿತದ ಲಕ್ಷ.
ಸರ್ವಗುಣದಲ್ಲಿ ಸನ್ನದ್ಧನಾಗಿಪ್ಪುದು ಸ್ವಯಾನುಭಾವದ ಸಂಬಂಧ.
ಇಂತೀ ಖಂಡಿತ ಅಖಂಡಿತ ಪರಿಪೂರ್ಣತ್ವ ವಿಭೇದವಿಲ್ಲದೆ
ಪೂರ್ಣತ್ವವಾಗಿ ಇಪ್ಪುದು ಸಂಗನಬಸವಣ್ಣನ ಸತ್ಕ್ರೀಮಾರ್ಗ,
ಬ್ರಹ್ಮೇಶ್ವರಲಿಂಗವನರಿದೆಹೆನೆಂದು
ಉಪಾಧಿಕೆ ನಿರುಪಾಧಿಕೆಯೆಂಬುದನರಿದು ಸ್ವಯವ ಕೂಡಿಹೆನೆಂದು.