ಹ ಪದದಿಂದ ಪ್ರಾರಂಭವಾಗುವ ವಚನಗಳು:
ಹುಳಿ ಬೆಳೆದು ಸಿಹಿಯಹ ತೆರನುಂಟು.ಸಿಹಿ ಬಲಿದು ಹುಳಿಯಹ ತೆರನುಂಟು.ಇಂತೀ ಉಭಯಸ್ಥಲಭೇದ ತದ್ಭಾವವಲ್ಲದೆ ಅನ್ಯವಲ್ಲ,ಏಣಾಂಕಧರ ಸೋಮೇಶ್ವರಲಿಂಗಕ್ಕೆ.
ಹುತ್ತದೊಳಗಣ ಹಾವ, ಮಡುವಿನೊಳಗಣ ಮತ್ಸ್ಯವ,ಮಹಾಕಾನನದ ವಾನರವ, ಹಿಡಿವ ಪರಿಯಿನ್ನೆಂತೊ ?ಹುತ್ತವನಗೆದು, ಮಡುವ ಹೂಳಿ,ಕಾನನವ ತರಿದು, ಇಂತಿವ ಹಿಡಿಯಬೇಕು.ಸಕಲೇಂದ್ರಿಯದೊಳಗಿರ್ದುವಸ್ತುವನರಿದನೆಂಬ ಮಿಟ್ಟೆಯ ಭಂಡರನೊಪ್ಪಏಣಾಂಕಧರ ಸೋಮೇಶ್ವರಲಿಂಗ.
ಹಸಿವು ತೃಷೆ, ಚೇತನ ಅಚೇತನಾದಿಗಳಿಗೆಯೂ ಉಂಟುಸ್ಥಾವರ ಚರಾದಿಗಳಿಗೆಲ್ಲಕೂ ಉಂಟು.ಆತ್ಮನರಿವಿನ ಸಂಬಂಧ ಎಳ್ಳಂತುಟೂ ಇಲ್ಲ.ಅದುಪಕಾಯದಂತೆ ತೋರಿ ಅಡಗುವ ಭೇದಏಣಾಂಕಧರ ಸೋಮೇಶ್ವರಲಿಂಗದಲ್ಲಿ.
ಹೊಲಬು ಹೊಲಬನೆ ಕಂಡು, ಶಿಲೆ ಕುಲದಲ್ಲಿ ಅಳಿದು,ಅನ್ನ ಅರ್ಪಿತದಲ್ಲಿ ಹಿಂಗಿ, ಉದಕ ಮಜ್ಜನದಲ್ಲಿ ನಿಂದು,ಪ್ರಸಾದ ಪ್ರಸನ್ನದಲ್ಲಿ ಐಕ್ಯವಾಗಿ,ಬಿಬ್ಬಿನ ಮನದಲ್ಲಿ ಒಬ್ಬುಳಿಯಾಯಿತ್ತು,ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
ಹುತ್ತದೊಳಗಣ ಉಡುವಿನ ಕಣ್ಣಬೆಟ್ಟದ ತುದಿಯಲ್ಲಿಹ ಕಾಗೆ ಕುಟಿಕಿಹೆನೆಂದುಹುತ್ತದ ಬಾಯ ನೋಡುತ್ತದೆ.ಉಡು ತಪ್ಪಿ ಹಾವು ಹೊರಟಿತ್ತು.ಹಾವಿನ ಕಣ್ಣ ಕಾಗೆ ಹರಿದು,ಹಾವು ಕಾಗೆಯ ಕಚ್ಚಿ ಎರಡೂ ಸತ್ತವು,ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
ಹೊಂದಿ ಕಾಬ ಸುಖವಿಲ್ಲ, ಮರೆದು ಕಾಬ ಅರಿವಿಲ್ಲ.ಉಭಯ ತನ್ನಷ್ಟವಾದಲ್ಲಿ, ಕ್ರೀ ಭಾವ ಐಕ್ಯಏಣಾಂಕಧರ ಸೋಮೇಶ್ವರಲಿಂಗದಲ್ಲಿ.
ಹಲವು ಬಲೆಯೊಳಗಾದ ಎರಳೆಕೊಲುವನ ಅಲಗ ನುಂಗಿತ್ತು.ಅಲಗರಗಿ ಬಲೆಯಳಿಯಿತ್ತು.ಹುಲ್ಲೆಯ ಹೊಲಬು ಲೇಸಾಯಿತ್ತು.ಏಣಾಂಕಧರ ಸೋಮೇಶ್ವರಲಿಂಗವನರಿತು.
ಹೊಳೆಯನೀಸುವನಂತೆ ಧರೆಯ ಒಲವರವುಂಟೆ ?ಸಂಸಾರಸಂಬಂಧಿಯಾದಲ್ಲಿ ಅವಿರಳನ ಗುಣವ ವೇಧಿಸಬಲ್ಲನೆ ?ನೆಲಹೊಲವನರಿಯದವ ಕಳವಿಗೆ ಹೋದಂತಾಯಿತ್ತು.ಸ್ಥಲಕುಳವನರಿಯದವನಿಗೆ ಕ್ರೀಯ ನೆಲ ಶುದ್ಧಿಯೇಕೆ ?ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಉಭಯಭಾವವನರಿಯಬೇಕು.
ಹಿಂಡಿನೊಳಗಣ ಕುರುಬನ, ತೋಳ ತಿಂಬಾಗಕುರಿ ಮಾಣಿಸಬಲ್ಲವೆ ? ಕಟ್ಟೊಡೆಯ ಕೊಲುವಾಗಮತ್ತೊಬ್ಬರು ಬೇಡಾ ಎನಲುಂಟೆ ?ಹುಟ್ಟಿಸಿದಾತ ಭವದ ಗೊತ್ತಿಂಗೆ ತಳ್ಳುವಡೆನಮ್ಮ ಗೊತ್ತಿನ ಅರಿವೇನ ಮಾಡುವುದು ?ಉಭಯವು ನಿನ್ನಾಟ, ಏಣಾಂಕಧರ ಸೋಮೇಶ್ವರಲಿಂಗವೆ.
ಹುತ್ತದೊಳಗಣ ಹಾವ, ಕೆರೆಯೊಳಗಣ ಕಪ್ಪೆ ನುಂಗಿತ್ತು.ಸರ್ಪನ ಕಪ್ಪೆಯ ಮಕ್ಷಿಕ ನುಂಗಿತ್ತು.ಆ ಮಕ್ಷಿಕವ ಗೃಹಗಾಹಿ ನುಂಗಿತ್ತು.ಅದೇನು ಚೋದ್ಯವೆಂದರಿಯೆ, ಏಣಾಂಕಧರ ಸೋಮೇಶ್ವರಲಿಂಗ.