ಕ್ಷಕಾರಂ ವಿದ್ಯಾತತ್ವಾತ್ಮಕ ಜ್ಞಾನಶಕ್ತಿಸ್ವರೂಪಮಾದ ಕಾರಣ
ಕರ್ಣಿಕಾಸ್ಥ ಹಕಾರಸವಿೂಪ ದಳದಲ್ಲಿ ನ್ಯಸ್ತವಾಯಿತ್ತು.
ಮಧ್ಯದ ಚಂದ್ರಮಂಡಲದ ಪೂರ್ವದಳಾದಿಯಾಗಿ
ಅ ಆ ಇ ಈ ಉ ಊ ಋ Iೂ ಒ ಓ ಏ ಐ ಓ ಔ ಅಂ ಆಃ
ಎಂಬೀತರದಿಂ ತತ್ವಾಖ್ಯ ಮೂರ್ತಾಖ್ಯಂಗಳೆನಿಪ
ಹ್ರಸ್ವ ದೀರ್ಘಂಗಳಾದ ಷೋಡಶ ಸ್ವರಂಗಳಿರ್ಪುವೆಂದು
ನಿರವಿಸಿದೆಯಯ್ಯಾ,
ನಿರಾಳಮೂರ್ತಿ ನಿಸ್ತುಳ ಪರಮ ಶಿವಲಿಂಗೇಶ್ವರಾ.