ಅಥವಾ
(4) (6) (8) (1) (0) (0) (0) (0) (0) (0) (0) (0) (1) (0) ಅಂ (1) ಅಃ (1) (4) (0) (4) (0) (0) (0) (0) (1) (0) (0) (0) (0) (0) (0) (0) (1) (0) (1) (0) (2) (1) (1) (2) (2) (3) (0) (0) (0) (1) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕವಿಗಳ ತರ್ಕದ ಪ್ರಸ್ತಾವನ ವಚನ: ಪಾದ ಪ್ರಾಸ ಗಣವ ಬಲ್ಲೆನೆಂಬ ಅಣ್ಣಗಳು ನೀವು ಕೇಳಿರೊ. ತನ್ನಂಗಪಥದಲ್ಲಿದ್ದ ಪೃಥ್ವಿಯ ಮೂಲವನಳಿದು ಆ ನಾಗಲೋಕದ ಸರ್ಪನ ಎಬ್ಬಿಸಿ, ಆಕಾಶಮೂಲಕ್ಕೆ ನಡೆಸಬಲ್ಲಡೆ ಆತ ಪಾದಕಾರುಣ್ಯದ ಬಲ್ಲನೆಂದೆನಿಸಬಹುದು. ಅಷ್ಟದಳಕಮಲದ ಹುಗುಲ ಹಿಡಿದು ಮೆಟ್ಟಿ ಒಂಬತ್ತು ಪರಿಯಲ್ಲಿ ಸುತ್ತಿ ಆಡುವ ಅಗ್ರವ ನಿಲ್ಲಿಸಿ, ನಾಲ್ಕು ಮುಖದ ಬಿರಡದಲ್ಲಿ ಸಿಂಹಾಸನವನಿಕ್ಕಿದ ಮಹಾರಾಯನ ನಿರೀಕ್ಷಣವ ಮಾಡಬಲ್ಲರೆ ಆತ ಪ್ರಾಸವ ಬಲ್ಲವನೆಂದೆನಿಸಬಹುದು. ಹತ್ತುಮುಖದಲ್ಲಿ ಹರಿದಾಡುವ ವಾಯುವ ಏಕವ ಮಾಡಬಲ್ಲರೆ, ಮೂರು ಪವನವೊಂದರೊಳು ಕೂಡಿ ಪಂಚದ್ವಾರದಲ್ಲಿ ತುಂಬಿ ಮೇಲ್ಗಿರಿಗೆ ನಡಸಿ ಪರಮಾಮೃತದ ಹೊಳೆಯ ನಿಲ್ಲಿಸಬಲ್ಲರೆ ಆತ ಗಣವ ಬಲ್ಲವನೆಂದೆನಿಸಬಹುದು. ಇದನರಿಯದೆ ಛಂದ ನಿಘಂಟು ಅಸಿ ವ್ಯಾಕರಣಂಗಳು ಪಂಚಮಹಾಕಾವ್ಯಂಗಳುಯೆಂಬ ಮಡಕಿಯ ಅಟ್ಟುಂಡ ಹಂಚಮಾಡಿ ಬಿಟ್ಟುಹೋಹುದನರಿಯದೆ ಆ ಹಂಚನೆ ಹಿಡಿದು ಕವಿಯೆಂದು ತಿರಿದುಂಬ ದೀಕ್ಷವಿಲ್ಲದ ತಿರುಕರಿಗೆ ಕವಿಗಳೆನುವವರ ಕಂಡು ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಕವಿಗಳುಯೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳು ನೀವು ಕೇಳಿರೊ. ಪ್ರಥಮ ಶಿವಾಲ್ಯದಲ್ಲಿ ಮೂಲಸ್ಥಾನದ ಲಿಂಗವನರಿದು ಅಲ್ಲಿದ್ದ ವಿಮಳವಾದ ಗಂಟ ಕೊಯಿದು, ಸಕಲ ಪರಿಮಳ ದ್ರವ್ಯಂಗಳ ಆ ಮೂಲಲಿಂಗಕ್ಕೆ ಕೊಡಬಲ್ಲಡೆ ಕ ಎಂಬ ಅಕ್ಷರದ ಭೇದವ ಬಲ್ಲನೆಂದೆನ್ನಬಹುದು. ಪರಬ್ರಹ್ಮನ ಆಶ್ರೈಸಬಲ್ಲಡೆ ವಿ ಎಂಬ ಅಕ್ಷರದ ಭೇದವ ಬಲ್ಲಡೆ ನಿಮ್ಮ ಹೆಸರ ನೀವೇ ಇಟ್ಟುಕೊಂಡು, ಕವಿಯೆಂಬ ಎರಡಕ್ಷರದ ಬೇದವನರಿಯದೆ ವಾದ ತರ್ಕವ ಮಾಡಿ ಗುರುಗುಡುವುದು ಕಾರಣವಲ್ಲ. ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕವಿಯೆಂಬ ಎರಡು ಐವತ್ತೆರಡು ಅಕ್ಷರದ ಭೇದವ ಅಷ್ಟದಳಕಮಲವ ವಿಚಾರಿಸುವುದು, ಅಲ್ಲದ ಕಾರಣ (?) ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಕಳ್ಳಆಡಿನ ಕಾಲ ಕಡಿದು, ಕೋಡಗನ ಹಲ್ಲುಕ್ಕಿತ್ತು, ಓಡ್ಯಾಡುವ ಎರಳೆಯ ತಿರುಳ ತಿಂದು, ಉಡುವಿನ ಕುಡಿನಾಲಗೆಯ ಕೂಡೆವೆಡವರಿದು ತಿಂದು, ದಿನವ ಕಳಿದುಳಿದಾತ ಎನ್ನ ಗುರುವು. ಯಾತಕೆಂದರೆ ಅರಿಕೇಶ್ವೆಲಿಂಗವನರಿವುದಕ್ಕೆ ತೆರಪಾಗಿರಣ್ಣಾ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಕಲಿಯುಗ ಮೊದಲಾದ ಇಪ್ಪತ್ತೊಂದು ಯುಗದಲ್ಲಿ ದಾವರೂಪವಾಗಿ ಇದ್ದನಯ್ಯಾ ಬಸವಣ್ಣ! ಬಲ್ಲರೆ, ಹೇಳಿ, ಅರಿಯದಿದ್ದರೆ ನೀವು ಕೇಳಿ. ಅದು ಎಂತೆಂದಡೆ: ಆದಿಯುಗದಲ್ಲಿ ಶರಣನೆಂಬ ಬಸವಣ್ಣ; ಜಂಗಮವೆಂಬ ನಿರಂಜನ. ಅನಾದಿಯೆಂಬ ಯುಗದಲ್ಲಿ ಬಸವಣ್ಣನೆ ಭಕ್ತ; ಜಂಗಮನೆ ಸದಾಶಿವಲಿಂಗ. ಅವ್ಯಕ್ತನೆಂಬ ಯುಗದಲ್ಲಿ ಬಸವನೆ ಅಲ್ಲಮ; ಜಂಗಮನೆ ಪೀಠಾಧಾರವೆಂಬಲಿಂಗ. ವ್ಯಕ್ತನೆಂಬ ಯುಗದಲ್ಲಿ ಬಸವನೆ ಬೊಮ್ಮಣ್ಣ; ಜಂಗಮನೆ ಭೂತೇಶ್ವರಲಿಂಗ. ಮಣಿರಣನೆಂಬ ಯುಗದಲ್ಲಿ ಬಸವನೆ ಆರೋಗ್ಯಕ್ಕೆ ವೈದ್ಯನಾದ. ಜಂಗಮನೆ ಪ್ರಂಚವಕ್ತ್ರನೆಂಬಲಿಂಗ. ವಿಶ್ವಾರಣನೆಂಬ ಯುಗದಲ್ಲಿ ಬಸವನೆ ಪೀತಶಂಭು; ಜಂಗಮನೆ ಏಕಭರಿತನೆಂಬಲಿಂಗ. ಅಲಂಕೃತನೆಂಬ ಯುಗದಲ್ಲಿ ಬಸವನೆ ಪ್ರಭುದೇವರು; ಜಂಗಮವೆ ಸರ್ವೇಶ್ವರಲಿಂಗ. ಕೃತಯುಗದಲ್ಲಿ ಬಸವನೆ ಗಜ್ಜಯ್ಯನಾದ; ಜಂಗಮವೆ ತ್ರಿಪುರಾಂತಕಲಿಂಗ. ತ್ರೇತಾಯುಗದಲ್ಲಿ ಬಸವನೆ ಬ್ರಾಹ್ಮಣನಾದ; ಜಂಗಮನೆ ಲೋಕೇಶ್ವರನೆಂಬಲಿಂಗ. ದ್ವಾರಪರಯುಗದಲ್ಲಿ ಬಸವನೆ ಶ್ರೀಧರಪಂಡಿತನಾದ; ಜಂಗಮವೆ ಶ್ರೀಶೈಲ ಮಲ್ಲಿಕಾರ್ಜುನನಾದ. .............ಕರುಣ ಬಸವನೆಂಬ ವೃಷಭ, ಜಂಗಮವೆ ಗೊಹೇಶ್ವರ. ಪ್ರಾಳಿಯೆಂಬ ಯುಗದಲ್ಲಿ ಬಸವನೆ ಭೃಂಗೀಶ್ವರ; ಜಂಗಮವೆ ಸದಾಶಿವ. ಅರ್ಭೂತನೆಂಬ ಯುಗದಲ್ಲಿ ಬಸವನೆ ರಾಮಚಂದ್ರ: ಜಂಗಮವೆ ಅನಾದಿಲಿಂಗ. ತಮಂಧನೆಂಬ ಯುಗದಲ್ಲಿ ಬಸವನೆ ಕಾಲರುದ್ರ; ಜಂಗಮವೆ ಊಧ್ರ್ವಪೀಠೇಶ್ವರ. ತಂಡಜನೆಂಬ ಯುಗದಲ್ಲಿ ಬಸವನೆ ಶಂಕರ; ಜಂಗಮವೆ ಸರ್ವೇಶ್ವರಲಿಂಗ. ಭಿನ್ನಜನೆಂಬ ಯುಗದಲ್ಲಿ ಬಸವನೆ ಪಶುಪತಿ; ಜಂಗಮವೆ ಮೂಕೇಶ್ವರಲಿಂಗ. ಇಂತೀ ಬಸವನೆಂಬ ರೂಪೇ ಭಕ್ತ. ಭಕ್ತನ ಮನದ ಕೊನೆಯ ಮೇಲೆ ಸೋಂಕಿ ಸುಳಿವಾತನೆ ಜಂಗಮ. ಇಂತೀ ಉಭಯವ ಏಕವಂ ಮಾಡುವ ನಂದಿನಿಯನಿದಿರಿಟ್ಟು ಪೂಜೆಯ ಮಾಡುವ ದ್ರೋಹಿಗಳಿಗೆ ನಾನೇನೆಂಬೆನಯ್ಯಾ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ