ಐ ಪದದಿಂದ ಪ್ರಾರಂಭವಾಗುವ ವಚನಗಳು:
ಐದರಿಂದ ಕಾಬುದು ಜೀವ, ಮೂವರಿಂದ ಕಾಬುದು ಆತ್ಮ.ಇಪ್ಪತ್ತೈದರಿಂದ ಕಾಬುದು ಪರಮ, ಮೂವತ್ತಾರರಿಂದ ಕಾಬುದು ಚಿತ್ತ.ಒಂದರಿಂದ ಕಾಣಿಸಿಕೊಂಬುದು ಚಿದಾನಂದ.ಚಿದಾನಂದವೆಂಬ ಆನಂದ ನಿಂದು, ಸದಮಲಾನಂದ ತಾನಾದಲ್ಲಿ,ಸದಾಸನ್ನದ್ಧವೆಂಬ ಆನಂದ ಹಿಂಗಿನಿಂದ ಉಳುಮೆ, ಕಮಠೇಶ್ವರಲಿಂಗ ತಾನಾದ ಶರಣ.