ಧರೆ ಗಿರಿಯನಂಬರವ ಖರಕಿರಣನ ಪ್ರಭೆಯ,
ಸುರಿವ ಮಳೆ ಉರಿವಗ್ನಿ ಮಾರುತನನು,
ಹರಿವಿರಂಚಿಗಳ ಕುಬೇರ ಇಂದ್ರ ಚಂದ್ರಾಮರರನು,
ಹರನು ಹಡದಲ್ಲಿ ನೆರವಾದವರೊಳರೆ?
ಕರಕಷ್ಟದ ಮಾನವರು ಪರಪುಟ್ಟದ ಮರಿಯಂತೆ
ಹರನ ದಾನವನುಂಡು ಬೇರೆ ಪರದೈವವುಂಟೆಂದು ಬೆಸಕೈವರು.
ಎರಡೇಳು ಲೋಕಕ್ಕೆ ಪರಮಪ್ರಭು
ತೆಲುಗೇಶ್ವರನೊಬ್ಬನೇ ಎಂದೆನ್ನದವನ ಬಾಯಲ್ಲಿಪಾಕುಳ.