ಭಕ್ತಿಸ್ಥಲಕ್ಕೆ ಒಬ್ಬ, ಮಾಹೇಶ್ವರಸ್ಥಲಕ್ಕೆ ಇಬ್ಬರು,
ಪ್ರಸಾದಿಸ್ಥಲಕ್ಕೆ ಆತನಳಿಯನಲ್ಲದಿಲ್ಲ,
ಪ್ರಾಣಲಿಂಗಿಸ್ಥಲಕ್ಕೆ ಮೂವರು,
ಶರಣಸ್ಥಲಕ್ಕೆ ನಾಲ್ವರು,
ಐಕ್ಯಸ್ಥಲಕ್ಕೆ ಅಕ್ಕನ ತಮ್ಮನಲ್ಲದಿಲ್ಲ.
ಇಂತೀ ಕುರುಹಿನ ಬೆಂಬಳಿಯನರಿದು,
ಬಿಡುವರ ಬಿಟ್ಟು, ತಡೆವರ ತಡೆವುತ್ತಿದ್ದೇನೆ
ಕೂಡಲಸಂಗಮದೇವರಲ್ಲಿ ಬಸವಣ್ಣನರಿಕೆಯಾಗಿ.