ಅ
(3)
ಆ
(3)
ಇ
(0)
ಈ
(0)
ಉ
(0)
ಊ
(0)
ಋ
(0)
ೠ
(0)
ಎ
(0)
ಏ
(0)
ಐ
(1)
ಒ
(1)
ಓ
(0)
ಔ
(0)
ಅಂ
(1)
ಅಃ
(1)
ಕ
(3)
ಖ
(0)
ಗ
(1)
ಘ
(0)
ಙ
(0)
ಚ
(0)
ಛ
(0)
ಜ
(0)
ಝ
(0)
ಞ
(0)
ಟ
(0)
ಠ
(0)
ಡ
(0)
ಢ
(0)
ಣ
(0)
ತ
(0)
ಥ
(0)
ದ
(0)
ಧ
(0)
ನ
(0)
ಪ
(3)
ಫ
(0)
ಬ
(3)
ಭ
(2)
ಮ
(3)
ಯ
(0)
ರ
(0)
ಱ
(0)
ಲ
(0)
ವ
(0)
ಶ
(0)
ಷ
(0)
ಸ
(2)
ಹ
(0)
ಳ
(0)
ವಚನಕಾರ: ಆಯ್ದಕ್ಕಿ ಲಕ್ಕಮ್ಮ
ಅಂಕಿತ ನಾಮ: ಮಾರಯ್ಯಪ್ರಿಯ ಅಮರೇಶ್ವರಲಿಂಗ
ಕಾಲ: 1160
ದೊರಕಿರುವ ವಚನಗಳು: 25 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ ಸು. 1160. ಆಯ್ದಕ್ಕಿ ಮಾರಯ್ಯನ ಹೆಂಡತಿ. ಈಕೆಯ 25 ವಚನಗಳು ದೊರೆತಿವೆ. ಕಲ್ಯಾಣದಲ್ಲಿ ಅಕ್ಕಿಯನ್ನು ಆಯ್ದು ಜೀವಿಸುತ್ತಿದ್ದ ಈ ದಂಪತಿಗೆ ಬಸವಣ್ಣ ಒಮ್ಮೆ ಅಕ್ಕಿಯ ದಾನ ನೀಡಿ, ಮಾರಯ್ಯ ಅದನ್ನು ಮನೆಗೆ ತಂದಾಗ ಲಕ್ಕಮ್ಮನು ಇಷ್ಟೊಂದು ಅಕ್ಕಿಯ ಆಸೆ ಅರಸನಿಗೆ ಇರಬೇಕು, ಶರಣನಿಗಲ್ಲ ಎಂದು ಹೇಳಿ ದುಡಿಮೆಯನ್ನು ತಪ್ಪಿಸುವ ದಾನವನ್ನು ಹಿಂದಿರುಗಿಸುವಂತೆ ಮಾಡಿದ ಕಥೆ ‘ಶೂನ್ಯಸಂಪಾದನೆ’ಯಲ್ಲಿ ಇದೆ.
ಸಂದಣಿಗೊಂಡು ಮನಹರುಷದಿಂದ ಬಸವಣ್ಣನ ಅಂಗಳಕ್ಕೆ ಹೋಗಿ
ತಿಪ್ಪೆಯ ತಪ್ಪಲಲ್ಲಿ ಬಿದ್ದಿದ್ದ ತಂಡುಲವ ಕಟ್ಟಿಕೊಂಡು
ಎಯಿದಾಗಿ ತರಲು ಎಯಿದಾಗಿ ಬಂದಿತ್ತಲ್ಲಾ!
ನಮಗೆ ಎಂದಿನಂದವೆ ಸಾಕು,
ಮತ್ತೆ ಕೊಂಡು ಹೋಗಿ ಅಲ್ಲಿಯೆ ಸುರಿ,
ಮಾರಯ್ಯಪ್ರಿಯ ಅಮಲೇಶ್ವರಲಿಂಗ ಕೊಟ್ಟ ಕಾಯಕವೆ ಸಾಕು ಮಾರಯ್ಯಾ.